ಡೈಲಿ ವಾರ್ತೆ:29 ಜೂನ್ 2023

ಉಳ್ಳಾಲ : ತ್ಯಾಗ,ಪ್ರೀತಿ,ಸಾಮರಸ್ಯದ ಸಂದೇಶವೇ ಈದ್ ಹಬ್ಬ, ಆಶ್ರಮವಾಸಿಗಳೊಂದಿಗೆ ಹಬ್ಬ ಆಚರಿಸಿದ ಸ್ಪೀಕರ್ ಖಾದರ್

ಉಳ್ಳಾಲ : ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ ಯು.ಟಿ ಖಾದರ್ ಅವರು ಈದ್ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಂಗಳೂರಿನ ಹೆಲ್ತ್ ಇಂಡಿಯಾ ಫೌಂಡೇಶನ್ ಆಶ್ರಯದಲ್ಲಿ ಸೋಮೇಶ್ವರದ ನೆಹರು ನಗರದ ಪಶ್ಚಿಮ್ ರಿಹ್ಯಾಬ್ ಮಾನಸಿಕ ಪುನಶ್ವೇತನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಈದ್ ಆಚರಣೆಯಲ್ಲಿ ಭಾಗವಹಿಸಿ ಬಿರಿಯಾನಿ ಊಟ ನೀಡಿ ಈದ್ ಹಬ್ಬವನ್ನ ಆಚರಿಸಿದರು.

ಈ ವೇಳೆ ಆಶ್ರಮವಾಸಿ ವೃದ್ಧೆಯೋರ್ವರು ತಾವೇ ತಯಾರಿಸಿದ್ದ ಈದ್ ಗ್ರೀಟಿಂಗ್ ಕಾರ್ಡ್ ವೊಂದನ್ನ ನೆಚ್ಚಿನ ಶಾಸಕ ಖಾದರ್ ಗೆ ನೀಡಿದರು. ಈ ವೇಳೆ ಮಾತನಾಡಿದ ಖಾದರ್ ಅಭಿವೃದ್ಧಿಯ ಕರ್ನಾಟಕ, ಬಲಿಷ್ಠ ಭಾರತ ನಿರ್ಮಾಣಕ್ಕೆ ಹಬ್ಬಗಳು ಸೇತುವೆಯಾಗಬೇಕು. ಆ ಮೂಲಕ ಸಮಾಜದಲ್ಲಿ ಪ್ರೀತಿ, ಸಹೋದರತೆಯ ವಾತಾವರಣ ನಿರ್ಮಾಣವಾಗಬೇಕು ಎಂದರು.