ಡೈಲಿ ವಾರ್ತೆ: 5 ಜುಲೈ 2023

ಮೂಡುಬೆಳ್ಳೆ:ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆಯಿಂದ ಮನೆ ಒಳಗೆ ನುಗ್ಗಿದ ನೀರು – ಸ್ಥಳೀಯರಿಂದ ಆಕ್ರೋಶ!

ಮೂಡುಬೆಳ್ಳೆ:ಉಡುಪಿ ಮೂಡುಬೆಳ್ಳೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಮಗಾರಿಯೂ ನಡೆಯುತ್ತಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಬದಿಯ ಮನೆಯೊಳಗ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಮಳೆ ನೀರು ಹರಿದು ಹೋಗದೆ ಕೃತಕ ನೆರೆಯು ಸಂಭವಿಸಿದ್ದು ಸ್ಥಳೀಯರು ಸೇರಿ ಜೆಸಿಬಿಯ ಮೂಲಕ ನೀರು ಹರಿದು ಹೋಗಲು ವ್ಯವಸ್ಥೆಯನ್ನು ಮಾಡಿದರು. ಸೂಕ್ತ ಚರಂಡಿಯನ್ನೇ ನಿರ್ಮಿಸದೆ ಹೆದ್ದಾರಿಯ ಕಾಮಗಾರಿಯನ್ನು ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.