ಡೈಲಿ ವಾರ್ತೆ:06 ಜುಲೈ 2023

ಕರಾವಳಿಯಲ್ಲಿ ಮಳೆಯ ಆರ್ಭಟದಿಂದ ಹೆಚ್ಚಿದ ಕಡಲ್ಕೊರೆತ: ಸಮುದ್ರ ಮತ್ತು ಹೊಳೆ ತೀರದಲ್ಲಿರುವ ನಿವಾಸಿಗಳ ಸುರಕ್ಷಿತಗೆ ಸನ್ನಿದ್ದರಾದ ಮಲ್ಪೆ ಕರಾವಳಿ ಕಾವಲು ಪಡೆ

ಉಡುಪಿ: ಕರಾವಳಿಯಲ್ಲಿ ಕೆಲವು ದಿನದಿಂದ ಸತತವಾಗಿ ಮಳೆಯಾಗುತ್ತಿದ್ದು ಮಳೆಯ ಆರ್ಭಟದಿಂದ ಕಡಲ್ಕೊರೆತ
ಹೆಚ್ಚಾಗಿದೆ. ಹವಾಮಾನ ಪ್ರಕಾರ ಇನ್ನೆರಡು ದಿನ ಮಳೆ ಮತ್ತು ಗಾಳಿ ಹೆಚ್ಚಾಗಲಿದೆ. ಸಮುದ್ರ ಮತ್ತು ಹೊಳೆ ತೀರದಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕರಾವಳಿ ಕಾವಲು ಮಲ್ಪೆ ಠಾಣೆಯ ಇನ್ಸ್ಪೆಕ್ಟರ್ ಡಾ. ಶಂಕರ್ ನೇತೃತ್ವದಲ್ಲಿ ಸಿಬ್ಬಂದಿಗಳು ಸನ್ನದ್ಧರಾಗಿದ್ದಾರೆ.

ವಿಪರೀತ ಮಳೆಯಿಂದ ಹಂಗಾರಕಟ್ಟೆ ಹೊಳೆ ಹರಿಯುತ್ತಿದ್ದು ಕೋಡಿ ಬೆಂಗ್ರೆ ನಿವಾಸಿಗಳ ಪ್ರಯಾಣಿಸುವ ಫೆರಿ ಬೋಟ್ ಸ್ಥಗಿತಗೊಳಿಸಲಾಗಿದೆ. ತುರ್ತು ಸೇವೆಗೆ ಬೇಕಾಗುವ ಬೋಟ್, ಲೈಫ್ ಜಾಕೆಟ್ ಇನ್ನಿತರ ಪರಿಕರಗಳನ್ನು ವ್ಯವಸ್ಥೆಗೊಳಿಸಲಾಗಿದೆ.