ಡೈಲಿ ವಾರ್ತೆ: 12 ಜುಲೈ 2023

ಬಡಕಬೈಲು ನವೋದಯ ಅಟೋ ರಿಕ್ಷಾ ಚಾಲಕ – ಮಾಲಕರ ಸಂಘದ ಗೌರವಧ್ಯಕ್ಷರಾಗಿ ಇಬ್ರಾಹಿಂ ನವಾಝ್, ಅಧ್ಯಕ್ಷರಾಗಿ ಗುಣರಾಜ್ ಆಯ್ಕೆ

ಬಂಟ್ವಾಳ : ಬಡಕಬೈಲು ನವೋದಯ ಅಟೋ ರಿಕ್ಷಾ ಚಾಲಕ – ಮಾಲಕರ ಸಂಘ ಇದರ 2023-24 ನೇ ಸಾಲಿನ ಗೌರವಧ್ಯಕ್ಷರಾಗಿ ಸತತ 5ನೇ ಬಾರಿಗೆ ಇಬ್ರಾಹಿಂ ನವಾಝ್ ಅವರು ಪುನರಾಯ್ಕೆ ಗೊಂಡಿರುತ್ತಾರೆ,

ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಗುಣರಾಜ್, ಉಪಾಧ್ಯಕ್ಷರಾಗಿ ಮಹಮ್ಮದ್ ಶೆರೀಫ್ , ಸಲಹೆಗಾರರಾಗಿ ಬಿ.ನಾರಾಯಣ್ ಹಾಗೂ ಬಶೀರ್ ಅಹ್ಮದ್ ಗಾಣೆಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಜೀದ್, ಜೊತೆ ಕಾರ್ಯದರ್ಶಿಯಾಗಿ ರೋಹಿತ್, ಕೋಶಾಧಿಕಾರಿಯಾಗಿ ಹಾರಿಸ್ ಆಯ್ಕೆಯಾಗಿದ್ದಾರೆ,

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂದ್ರಶೇಖರ, ಪ್ರಶಾಂತ್ ಪುಷ್ಪರಾಜ್, ಇಬ್ರಾಹಿಂ ಅವರನ್ನು ನೇಮಿಸಲಾಯಿತು.