ಡೈಲಿ ವಾರ್ತೆ: 19 ಜುಲೈ 2023

ಉಡುಪಿ: ನಡುರಸ್ತೆಯಲ್ಲಿ ಕಾಡುಕೋಣ ತಿರುಗಾಟ – ಆತಂಕಗೊಂಡ ವಾಹನ ಸವಾರರು

ಉಡುಪಿ: : ಕಾಡುಕೋಣವೊಂದು ರಸ್ತೆಗೆ ಬಂದು ವಾಹನ ಸವಾರರು ಆತಂಕಗೊಂಡ ಘಟನೆ ಪಿಲಾರುಖಾನ ಕಾಡು ಪ್ರದೇಶದಲ್ಲಿ ನಡೆದಿದೆ.

ಪಿಲಾರುಖಾನ ಅರಣ್ಯ ಪ್ರದೇಶದ ಸುತ್ತ ತಂತಿ ಬೇಲಿಯನ್ನು ಅಳವಡಿಸಿದ್ದು ಇದರಿಂದ ಒಂದು ಬದಿಯ ತಂತಿ ಬೇಲಿಯನ್ನು ದಾಟಿಕೊಂಡ ಬಂದ ದೊಡ್ಡ ಕಾಡುಕೋಣವೊಂದು ಮತ್ತೊಂದು ಬದಿಯ ಕಾಡಿಗೆ ಹೋಗಲು ಪರದಾಡಿತು.

ಈ ಸಂದರ್ಭದಲ್ಲಿ ಬೆಳ್ಮಣ್ ಶಿರ್ವ ಸಾಗುವ ವಾಹನ ಸವಾರರು ಕೆಲ ಕಾಲ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸುವಂತಾಗಿತ್ತು. ಸುಮಾರು 15 ನಿಮಿಷಗಳ ಬಳಿಕ ಕಾಡುಕೋಣ ತಂತಿ ಬೇಲಿಯನ್ನು ದಾಟಿಕೊಂಡು ಮತ್ತೊಂದು ಬದಿಯ ಕಾಡಿಗೆ ತೆರಳಿದೆ.