ಡೈಲಿ ವಾರ್ತೆ:20 ಜುಲೈ 2023

ಅಂತರ್ ರಾಷ್ಟ್ರೀಯ ಕ್ರೀಡಾಪಾಟು, ಕುಂದಾಪುರದ ಹೆಮ್ಮೆಯ ಸತೀಶ್ ಖಾರ್ವಿಯವರಿಗೆ ಗೃಹ ಸಚಿವರಿಂದ ಸನ್ಮಾನ

ಕುಂದಾಪುರ : ಅಂತರಾಷ್ಟ್ರೀಯ ಕ್ರೀಡಾಪಟು ಕುಂದಾಪುರದ ಹೆಮ್ಮೆಯ ಕುವರ ಸತೀಶ್ ಖಾರ್ವಿಯವರು ಆಂಧ್ರಪ್ರದೇಶದ ವಿಶಾಖಪಟ್ಟಣದ ರಾಜo ನಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯ ಎಂ – 1 ವಿಭಾಗದ 66 -ಕೆಜಿ ಯಲ್ಲಿ ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಮತ್ತು 4ನೇ ಕ್ಲಾಸಿಕ್ ರಾಷ್ಟ್ರೀಯ ಡೆಡ್ಲಿ ಲಿಫ್ಟ್ ನೂತನ ದಾಖಲೆ ಮಾಡಿರುವುದನ್ನು ಗುರುತಿಸಿ, ಕರ್ನಾಟಕ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುರುವಾರ ಬೆಂಗಳೂರಿನಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಬುದ್ಧನ ವಿಗ್ರಹದ ಸ್ಮರಣಿಕೆ ಕೊಟ್ಟು ಗೌರವಿಸಿದ ಸಚಿವರು, ಖಾರ್ವಿಯವರಿಂದ ಸ್ಪರ್ಧೆಗಳ ಬಗ್ಗೆ ಮಾಹಿತಿ ಪಡೆದುಕೊಂಡು, ರಾಜ್ಯಕ್ಕೆ ಇನ್ನಷ್ಟು ಕೀರ್ತಿ ತರುವಂತೆ ಹುರಿದುಂಬಿಸಿದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಸತೀಶ್ ಖಾರ್ವಿ, ಸಚಿವರ ಪ್ರೀತ್ಯಾದರಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವ ಸ್ಫೂತಿ ದೊರೆತಿದೆ ಎಂದು ಮನದುಂಬಿ ನುಡಿದರು.