ಡೈಲಿ ವಾರ್ತೆ: 24 ಜುಲೈ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಶರಾವತಿ ಹಿನ್ನೀರು ಕಳಸವಳ್ಳಿಯಲ್ಲಿ ಕೆಟ್ಟು ನಿಂತ ಲಾಂಚ್ ಗಳು: ಸ್ಥಳೀಯರ ಹಾಗೂ ಸಿಗಂದೂರು ಪ್ರವಾಸಿಗರ ಗೋಳು ಕೇಳುವವರಾರು.? ಕಣ್ಮುಚ್ಚಿ ಕುಳಿತ ಶಿವಮೊಗ್ಗ ಜಿಲ್ಲಾಡಳಿತ!

ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿ – ಅಂಬಾರಗೋಡ್ಲು ಸನಿಹದ ಶರಾವತಿ ಸಂತ್ರಸ್ತರು ಹಾಗೂ ಸಿಗಂದೂರು ಪ್ರವಾಸಿಗರಿಗೆ ಜಲ ಸಾರಿಗೆಯಾದ ಲಾಂಚ್ ಸೌಕರ್ಯವನ್ನೇ ನಂಬಿಕೊಂಡಿದ್ದವರು ಎರಡೂ ಲಾಂಚ್ ಕೆಟ್ಟು ನಿಂತು ಹಲವು ದಿನಗಳು ಉರುಳಿದರೂ ಇತ್ತ ಚಿತ್ತಹರಿಸದ ಶರಾವತಿ ಹಿನ್ನೀರಿನ ಹೊಳೆಬಾಗಿಲಿನಲ್ಲಿ ಜನಸಂಚಾರ ಅಸ್ಥವ್ಯಸ್ತ ಜಲಸಾರಿಗೆ ಇಲಾಖೆಯ ನಿರ್ಲಕ್ಷತನಕ್ಕೆ ಇದೊಂದು ದೊಡ್ಡ ಉದಾಹರಣೆ. ಕಣ್ಣಿದ್ದೂ ಜಾಣ ಕುರುಡುತನ ನಡೆಯ ಶಿವಮೊಗ್ಗ ಜಿಲ್ಲಾಡಳಿತ ವಿರುದ್ಧ ಶರಾವತಿ ಸಂತ್ರಸ್ತರು ಹಾಗೂ ಪ್ರವಾಸಿಗರು ಹಿಡಿಶಾಪ ಹಾಕುತ್ತಿರುವುದು ಅಷ್ಟೇ ನಗ್ನಸತ್ಯ