ಡೈಲಿ ವಾರ್ತೆ: 24 ಜುಲೈ 2023

ಉಡುಪಿ ಜಿಲ್ಲೆಯಾದ್ಯಂತ ಮುಂದುವರಿದ ವರುಣನ ಆರ್ಭಟ:ನಾಳೆ (ಜು.25) ರಂದು ಶಾಲಾ, ಕಾಲೇಜಿಗೆ ರಜೆ ಘೋಷಣೆ

ಉಡುಪಿ: ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ಮಳೆಯ ಮುನ್ಸೂಚನೆ ಹಾಗೂ ಹವಾಮಾನ ಇಲಾಖೆ 204 ಮಿ. ಮೀ ಗಿಂತಲೂ ಅಧಿಕ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಇವರು ಶಾಲಾ ಕಾಲೇಜ್‌ಗಳಿಗೆ ಜುಲೈ 25ರ(ನಾಳೆ) ಮಂಗಳವಾರ
ಜಿಲ್ಲೆಯಾದ್ಯಂತ ರಜೆ ಘೋಷಿಸಿ ಆದೇಶಿಸಿದ್ದಾರೆ.