ಡೈಲಿ ವಾರ್ತೆ: 31 ಜುಲೈ 2023

ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ, ಕೋಟೇಶ್ವರ ಘಟಕ ಮತ್ತು ಮಹಿಳಾ ಸಂಘಟನೆ ವತಿಯಿಂದ “ಸ್ವಯಂಪ್ರೇರಿತ ರಕ್ತ ದಾನ ಶಿಬಿರ”

ಕುಂದಾಪುರ:ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಕೋಟೇಶ್ವರ ಘಟಕ & ಮಹಿಳಾ ಸಂಘಟನೆ. ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ (ರಿ.)ಅಂಬಲಪಾಡಿ,ಉಡುಪಿ ನೇತೃತ್ವದಲ್ಲಿ,ರಕ್ತ ನಿಧಿ ಕೆ. ಎಂ. ಸಿ, ಮಣಿಪಾಲ ಮತ್ತು ಜಿಲ್ಲಾಡಳಿತ ಉಡುಪಿ, ರೋಟರಿ ಕ್ಲಬ್ ಕೋಟೇಶ್ವರ ಹಾಗೂ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಜು. 30 ರಂದು ಭಾನುವಾರ ಕೋಟೇಶ್ವರ ಶಾರದಾ ಕಲ್ಯಾಣ ಮಂಟಪದಲ್ಲಿ ನಮ್ಮೆಲ್ಲರ ಮಾರ್ಗದರ್ಶಕರಾಗಿರುವ ನಾಡೋಜ ಡಾ.ಜಿ ಶಂಕರ್ ರವರ ಈ ಯೋಜನೆಯ ಸೌಭಾಗ್ಯದೊಂದಿಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಕೋಟೇಶ್ವರ ಘಟಕದ ಅಧ್ಯಕ್ಷರಾದ ಸುನೀಲ್ ಜಿ. ನಾಯ್ಕ್ ಅವರು ವಹಿಸಿದ್ದು. ಉಡುಪಿ ಜಿಲ್ಲೆಯ ಮೊಗವೀರ ಯುವ ಸಂಘಟನೆ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ ಇವರು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅಥಿತಿಗಳಾಗಿ ಜಗದೀಶ್ ಮಾರ್ಕೋಡು ಅಧ್ಯಕ್ಷರು ರೋಟರಿ ಕ್ಲಬ್ ಕೋಟೇಶ್ವರ, ಶ್ರೀನಿವಾಸ ಕುಂದರ್ ಗೋಪಾಡಿ ,ಶ್ರೀ ಶಂಕರ್ ನಾಯ್ಕ್ ಅರಸರ ಬೆಟ್ಟು, ದಿವ್ಯ ಕುಂದಾಪುರ ನಿರ್ವಾಹಕರು ಜೈ ಕುಂದಾಪ್ರ ಸೇವಾ ಟ್ರಸ್ಟ್ ಮಹಿಳಾ ಘಟಕ, ಅನುಸೂಯ ಕೆದಿಯೂರು ಮಹಿಳಾ ಅಧ್ಯಕ್ಷರು ಕೋಟೇಶ್ವರ ಘಟಕ,ಮಹಿಳಾ ಕಾರ್ಯದರ್ಶಿ ಉಷಾ ಮಾರ್ಕೋಡು, ಗೌರವಾಧ್ಯಕ್ಷರಾದ ಸೌರಭ್ ರಾಜೀವ ಮರಕಾಲ,ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷರಾದ ಶಿವರಾಮ್ ಕೆ. ಎಮ್, ಹಿರಿಯರಾದ ರಾಮ ನಾಯ್ಕ್ ಬೀಜಾಡಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಶ್ ಎಸ್ ಕೊರವಡಿ, ಅಕ್ಷಯ್ ಕಸ್ತೂರ್ಬಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಮಣಿಪಾಲ,
ಸತೀಶ್ ಎಮ್ ನಾಯ್ಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು, ಅಶೋಕ್ ತೆಕ್ಕಟ್ಟೆ ಅವರು ನಿರೂಪಿಸಿದರು, ಕಾರ್ಯದರ್ಶಿ ಪುಂಡಲೀಕ ಮೊಗವೀರ ಧನ್ಯವಾದ ಸಮರ್ಪಿಸಿದರು.

ಯಶಸ್ವಿ ರಕ್ತ ದಾನ ಶಿಬಿರದಲ್ಲಿ 170 ಯೂನಿಟ್ ರಕ್ತ ಸಂಗ್ರಹಿಸಿದೆವು