ಡೈಲಿ ವಾರ್ತೆ: 31 ಜುಲೈ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ: ಮೀನುಗಾರಿಕೆ ಮಾಡುತ್ತಿರುವ ಸಂದರ್ಭ ದೋಣಿಯಿಂದ ಸಮುದ್ರಕ್ಕೆ ಬಿದ್ದು ವ್ಯಕ್ತಿ ಸಾವು!

ಅಂಕೋಲಾ : ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ದೋಣಿಯಿಂದ ಆಯಾ ತಪ್ಪಿ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಭಾವಿಕೇರಿ ಹರಿಕಂತ್ರವಾಡದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಭಾವಿಕೇರಿ ಗ್ರಾಮದ ನಿವಾಸಿ ವಿಠ್ಠಲ ಗೋವಿಂದ ಹರಿಕಂತ್ರ (49) ಮೃತಪಟ್ಟ ಮೀನುಗಾರ. ಮೃತನು ಶ್ರೀ ಆರ್ಯಾದುರ್ಗಾ ದೋಣಿಯ ಮೇಲೆ ಸಮುದ್ರಕ್ಕೆ ಬಲೆ ಹಾಕಿ ಮೀನು ಹಿಡಿಯುತ್ತಿರುವ ಸಂದರ್ಭದಲ್ಲಿ ಸಮುದ್ರದ ಅಲೆಗೆ ಪಾತಿದೋಣಿ ರೋಲ್ ಆಗಿದ್ದರಿಂದ ಆಯಾ ತಪ್ಪಿ ಸಮುದ್ರದ ನೀರಿಗೆ ಬಿದ್ದು, ಅಸ್ವಸ್ಥ ನಾಗಿದ್ದ ಆತನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುವರಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಈ ಕುರಿತು ಚಂದ್ರಕಾಂತ ಮನೋಹರ ಹರಿಕಂತ್ರ ಪೊಲೀಸ ದೂರು ನೀಡಿದ್ದಾರೆ. ಪಿಎಸ್‍ಐ ಸುನೀಲ ಹುಲ್ಲೋಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಓರ್ವ ಪುತ್ರನನ್ನು ಅಗಲಿದ್ದಾರೆ.