ಡೈಲಿ ವಾರ್ತೆ:03 ಆಗಸ್ಟ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಹೊಳೆಬಾಗಿಲು ಶರಾವತಿ ಹಿನ್ನಿರಿನಲ್ಲಿ ಮುಳುಗಿದ 10 ಚಕ್ರದ ಲಾರಿ – ಚಾಲಕ ಪ್ರಾಣಾಪಾಯದಿಂದ ಪಾರು!
ಇಂತಹ ಅವಘಡಗಳು ನೆಡೆಯುತ್ತಿದ್ದರೂ ಶಿವಮೊಗ್ಗ ಜಿಲ್ಲಾಡಳಿತ ಮೌನಕ್ಕೆ ಶರಣು!

ಹೊಳೆಬಾಗಿಲು ಶರಾವತಿ ಹಿನ್ನಿರಿನಲ್ಲಿ ಮುಳುಗಿದ 10 ಚಕ್ರದ ಲಾರಿ – ಲಾರಿ ಚಾಲಕ ಲಾರಿಯಿಂದ ಹಾರಿ ಪ್ರಾಣಾಪಾಯದಿಂದ ಪಾರು – ಇಂತಹ ಅವಘಡಗಳು ನೆಡೆಯುತ್ತಿದ್ದರೂ ಶಿವಮೊಗ್ಗ ಜಿಲ್ಲಾಡಳಿತ ಮೌನಕ್ಕೆ ಶರಣು

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಸಿಗಂದೂರು ತೆರಳುವ ಅಂಬಾರಗೋಡ್ಲು ಶರಾವತಿ ಹಿನ್ನೀರು ಅಡ್ಡಲಾಗಿ ಸೇತುವೆ ಕಾಮಗಾರಿಯೂ ಭರದಿಂದ ಸಾಗುತ್ತಿದ್ದೂ, ಇಂದು ಸಂಜೆ ಸುಮಾರು 06:30 ರ ಹೊತ್ತಿಗೆ ಸೇತುವೆ ಕಾಮಗಾರಿ ಅನುಷ್ಠಾನ ಮಾಡುತ್ತಿರುವ ಸಲುವಾಗಿ ಕಬ್ಬಿಣ ಹೊತ್ತು ತಂದ 10 ಚಕ್ರದ ಲಾರಿಯೂ ಹಿಮ್ಮುಖವಾಗಿ ಚಾಲನೆ ಮಾಡಿದ ಲಾರಿ ಚಾಲಕ ತನಗೆ ನಿಯಂತ್ರಣ ತಪ್ಪಿ ಶರಾವತಿ ಹಿನ್ನೀರಿಗೆ ಬೀಳುತ್ತಿದಂತೆ ಲಾರಿ ಚಾಲಕ ಸಮಯಪ್ರೆಜ್ಞೆಯಿಂದ ದಿಢೀರನೇ ಲಾರಿಯಿಂದ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇಂತಹ ಅವಘಡಗಳು ಇತ್ತೀಚಿಗೆ ಅಲ್ಲೊಂದು ಇಲ್ಲೊಂದು ಆಗುತ್ತಿರುವ ಹಿನ್ನೆಲೆ ಜಾಗ್ರತೆ ವಹಿಸಬೇಕಾದ ಶಿವಮೊಗ್ಗ ಜಿಲ್ಲಾಡಳಿತ ಮೌನಕ್ಕೆ ಶರಣಾಗಿರುವ ಕುರಿತು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ