ಡೈಲಿ ವಾರ್ತೆ:09 ಆಗಸ್ಟ್ 2023

ಹಾವು ಕಚ್ಚಿದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಮಾಂತ್ರಿಕನ ಮಾತು ಕೇಳಿ ಸಗಣಿಯಲ್ಲಿ ಹೂತಿಟ್ಟು ಹುಚ್ಚಾಟ: ಬಾಲಕಿ ಮೃತ್ಯು.!

ಷಹಜಹಾನ್‌ ಪುರ: ಹಾವು ಕಚ್ಚಿದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಮಾಂತ್ರಿಕನ ಮಾತು ಕೇಳಿ ಮೂಢನಂಬಿಕೆಗೆ ಪ್ರಾಣವೊಂದು ಹಾರಿ ಹೋಗಿದೆ.

ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಶಹಜಹಾನ್ ಪುರ ಜಿಲ್ಲೆಯ ರಾವತ್ ಪುರ ಗ್ರಾಮದಲ್ಲಿ 3 ದಿನಗಳ ಹಿಂದೆ ಘಟನೆ ನಡೆದಿದೆ.

ಬಾಲಕಿಗೆ ಹಾವು ಕಚ್ಚಿದೆ. ಈ ವೇಳೆ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಊರ ಮಾಂತ್ರಿಕನ ಬಳಿಗೆ ಕರೆದೊಯ್ದಿದ್ದಾರೆ. ಮಗು ವಿಷದಿಂದ ಸಾವನ್ನಪ್ಪಿದೆ. ಮಾಂತ್ರಿಕ ಬಾಲಕಿ ಬದುಕಿದ್ದಾಳೆ ಎಂದು ಹೇಳಿ ದೇಹವನ್ನು ಸಗಣಿ, ಬೇವಿನ ಸೊಪ್ಪಿನಿಂದ ಮುಚ್ಚಿಸಿದ್ದಾನೆ. ಆದರೂ ಮಗು ಬದುಕಿಲ್ಲ. ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.