ಡೈಲಿ ವಾರ್ತೆ:09 ಆಗಸ್ಟ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾಗರ ಗ್ರಾಮಾಂತರ ಠಾಣಾ ಸಿಪಿಐ ಪ್ರವೀಣ್ ಕುಮಾರ್ ವರ್ಗಾವಣೆ – ಆತ್ಮೀಯ ಬೀಳ್ಕೊಡುಗೆ ಮಾಡಿ ಗೌರವ ಸಮರ್ಪಣೆ

ಸಾಗರ :ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದ ಧಕ್ಷ, ಪ್ರಾಮಾಣಿಕ, ಜನಸ್ನೇಹಿ, ಸಾರ್ವಜನಿಕರೊಂದಿಗೆ ಸದಾ ಮಂದಸ್ಮಿತರಾಗಿ ಉತ್ತಮ ಸ್ಪಂದನೆ ನೀಡುತ್ತಿದ್ದ ಸಿಪಿಐ ಪ್ರವೀಣ್ ಕುಮಾರ್ ರವರು ವರ್ಗಾವಣೆಯಾಗಿದ್ದೂ, ಗ್ರಾಮಾಂತರ ಪೊಲೀಸ್ ಠಾಣಾ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು, ಸಹ ಪೊಲೀಸ್ ಸಿಬ್ಬಂದಿಗಳು ಆತ್ಮೀಯವಾಗಿ ಬೀಳ್ಕೊಡುಗೆಯೊಂದಿಗೆ ಗೌರವ ನೀಡಿದರು.

ಸಾಗರ ಗ್ರಾಮಾಂತರ ಠಾಣಾ ಕರ್ತವ್ಯ ನಿರತ ಸಿಪಿಐ ಪ್ರವೀಣ್ ಕುಮಾರ್ ರವರು ನನಗೆ ಅತ್ಯಂತ ಆತ್ಮೀಯರಾಗಿದ್ದೂ, ಪೊಲೀಸ್ ಅಧಿಕಾರಿಯಾಗಿ ನಾನು ತುಂಬಾ ಹತ್ತಿರದಿಂದ ಭಾಂಧವ್ಯ ಹೊಂದಿರುವುದಲ್ಲದೇ ನನ್ನ ಹಿರಿಯ ಸಹೋದರರಂತೆ ನಲ್ಮೆಯ ಅಧಿಕಾರಿಯಾಗಿದ್ದೂ ನನ್ನ ಹೆಮ್ಮೆಯ ಗೌರವದ ಸಂಗತಿ. ಸ್ಥಳೀಯರ ಸಮಸ್ಯೆಯನ್ನೂ ಹೊತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದಾಗ ಪ್ರೀತಿಯಿಂದ ಬರಮಾಡಿಕೊಂಡು ಸಮಸ್ಯೆ ಹೊತ್ತು ತಂದವರಿಗೆ ಅತ್ಯಂತ ಸಮಾಧಾನದಿಂದ ಕೂರಿಸಿ ನ್ಯಾಯಸಮ್ಮತವಾದ ತೀರ್ಪು ನೀಡುತ್ತಿರುವ ಅಗಾಧ ಬುದ್ದಿವಂತಿಕೆ ಬಲ್ಲವರಾಗಿದ್ದರು.*

ಸಿಪಿಐ ಪ್ರವೀಣ್ ಕುಮಾರ್ ರವರ ಅಧಿಕಾರ ಅವಧಿಯಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಮಿನಲ್ ಪ್ರಕರಣಗಳು ವಿರಳವಾಗಿದ್ದೂ, ಕ್ರಿಮಿನಲ್ ಗಳಿಗೆ ಸಿಂಹಸ್ವಪ್ನರಾಗಿ ಕ್ರಿಮಿನಲ್ ಪ್ರಕರಣಕ್ಕೆ ಬ್ರೇಕ್ ಹಾಕಿರುವುದು ಅಷ್ಟೇ ನಗ್ನಸತ್ಯ

ವರ್ಗಾವಣೆಯೂ ಸರ್ಕಾರಿ ಅಧಿಕಾರಿಗಳಿಗೆ ಮಾಮೂಲಿ. ಸಿಪಿಐ ಪ್ರವೀಣ್ ಕುಮಾರ್ ರವರಿಗೆ ತಮ್ಮಗಳ ಸೇವಾವಧಿಯಲ್ಲಿ ಉನ್ನತ ಮಟ್ಟದ ಪದೋನತಿ ದೊರೆಯಲಿ ಎಂದೂ ಶುಭ ಹಾರೈಸುತ್ತೇನೆ.