ಡೈಲಿ ವಾರ್ತೆ:11 ಆಗಸ್ಟ್ 2023

ಅಬುಧಾಬಿ : ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಕರ್ನಾಟಕ ಮೀಲಾದ್ ಸ್ವಾಗತ ಸಮಿತಿ ರಚನೆ

ಅಬುಧಾಬಿ : ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಜನ್ಮ ದಿನಾಚರಣೆಯ ಪ್ರಯುಕ್ತ, ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಕರ್ನಾಟಕ ಸಮಿತಿ ವತಿಯಿಂದ ನಡೆಯುವ ಕರ್ನಾಟಕ ಮೀಲಾದ್ ಕಾನ್ಪ್ ರೆನ್ಸ್ ಮತ್ತು ಮಕ್ಕಳ ಕಲಾ ಸಾಹಿತ್ಯ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ ಇವರ ಪ್ಲಾಟ್ ನಲ್ಲಿ ಇತ್ತೀಚೆಗೆ ನಡೆಯಿತು .

ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಕರ್ನಾಟಕ ಸಮಿತಿಯ ಅಧ್ಯಕ್ಷ ಶಹೀರ್ ಹುದವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಫಿಳ್ ಝೈನ್ ಸಖಾಫಿ ದುವಾ ನೆರವೇರಿಸಿದರು. ಕೆ.ಐ.ಸಿ ವಿದ್ಯಾಸಂಸ್ಥೆಯ ಕೇಂದ್ರ ಸಮಿತಿ ಅಧ್ಯಕ್ಷ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ ಕಾರ್ಯಕ್ರಮ ಉದ್ಘಾಟಿಸಿದರು. ಹನೀಫ್ ಅರಿಯಮೂಲೆ ವಿಷಯ ಮಂಡಿಸಿದರು.

ಇದೇ ವೇಳೆ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಸಯ್ಯಿದ್ ಅಸ್ಕರ್ ಅಲಿ ತಂಙಳ್, ಸಯ್ಯಿದ್ ಅಬ್ದುಲ್ ರಹೀಮಾನ್ ತಂಙಳ್ ಹಾಗೂ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ಚೆರ್ಮನ್ ಆಗಿ ಶಹೀರ್ ಹುದವಿ , ವೈಸ್ ಚೇರ್ಮನ್ ಆಗಿ
ಹನೀಫ್ ಅರಿಯಮೂಲೆ,
ಕನ್ವೀನರ್ ಆಗಿ ಹಾಫಿಝ್ ಝೈನ್ ಸಖಾಫಿ, ವೈಸ್ ಕನ್ವೀನರ್ ಆಗಿ ತ್ವಾಹ ಉಪ್ಪಿನಂಗಡಿ, ಕೋಡಿನೇಟರ್ ಆಗಿ ಹಸನ್ ದಾರಿಮಿ ಪುತ್ತೂರು, ಕೋಶಾಧಿಕಾರಿಯಾಗಿ ಹಾಜಿ ಶಾಫಿ ಪೆರುವಾಯಿ , ವೇದಿಕೆ ಉಸ್ತುವಾರಿಯಾಗಿ ಅಬೂಬಕ್ಕರ್ ಮುಂಡೋಲೆ ಒಳಗೊಂಡ 55 ಸದಸ್ಯರ ಸ್ವಾಗತ ಸಮಿತಿ ರಚಿಸಲಾಯಿತು.

ಈ ಸಂದರ್ಭದಲ್ಲಿ ಅಬೂಬಕ್ಕರ್ ಸಕಲೇಶಪುರ, ಬಶೀರ್ ಚೆರಂಭಾಣೆ, ಹಿದಾಯತ್ ಮರ್ವೆಲು, ಶಬ್ಬೀರ್ ಕನ್ನಡಿಕಟ್ಟೆ , ಬಶೀರ್ ಕಾವು, ಇಸಾಕ್ ಕೊಡ್ನೀರು ಮೊದಲಾದವರು ಉಪಸ್ಥಿತರಿದ್ದರು.

ಯಹ್ಯಾ ಕೊಡ್ಲಿಪೇಟೆ ಸ್ವಾಗತಿಸಿ, ನಾಸೀರ್ ಆತೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.