ಡೈಲಿ ವಾರ್ತೆ:18 ಸೆಪ್ಟೆಂಬರ್ 2023

ಡಾ. ಸತೀಶ್ ಪೂಜಾರಿ ರವರಿಗೆ ಸಾಂಸ್ಕೃತಿ ರಾಯಭಾರಿ ಸನ್ಮಾನ

ಕುಂದಾಪುರ: ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ಸೆಪ್ಟೆಂಬರ್ 9 ರಿಂದ 15 ರ ವರೆಗೆ ಕುಂದಾಪುರ ದ ಶ್ರೀ ಲಕ್ಷ್ಮಿ ನರಸಿಂಹ ಕಲಾ ಮಂದಿರ ದಲ್ಲಿ ನಡೆಯುವ ಜೇಸಿ ಸಪ್ತಾಹ ದಲ್ಲಿ ಮಾತಾ ಆಸ್ಪತ್ರೆ ಯಾ ವೈದ್ಯಾಧಿಕಾರಿ ಡಾ. ಸತೀಶ್ ಪೂಜಾರಿ ರವರನ್ನು ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ನೀಡಿ
ಸನ್ಮಾನಿಸಲಾಯಿತು.

ಕಾರ್ಯಕ್ರಮ ದ ಸಭಾಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾದ ಡಾ ಸೋನಿ ವಹಿಸಿದರು.

ಸಮಾರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಕುಂದಾಪುರ ಮಾತಾ ಆಸ್ಪತ್ರೆ ಯಾ ನಿರ್ದೇಶಕ ರಾದ ಡಾ. ಪ್ರಕಾಶ್ ತೊಳಾರ್ ವೈದ್ಯಾಧಿಕಾರಿ ಹಾಗೂ ರೋಟರಿ ಉಪ ರಾಜ್ಯಪಾಲರದ ಡಾ. ಸಂದೀಪ್ ಶೆಟ್ಟಿ ವಲಯ 15 ರ ಪೂರ್ವ ವಲಯಾಧಿಕಾರಿ ಅಬ್ದುಲ್ ಜಬ್ಬಾರ್ ಸಾಹೇಬ್ ಯೋಗ ಗುರು ಸಂಜೀವಣ್ಣ ಡಾ. ದೀಕ್ಷಿತಾ ಪಟೇಲ್
ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ. ನಾಗೇಶ ನಾವಡ. ವಿಜಯ್ ಭಂಡಾರಿ ಶ್ರೀಧರ್ ಸುವರ್ಣ ಚಂದ್ರಕಾಂತ್ ಗಿರೀಶ್ ಹೆಬ್ಬಾರ್ ಪ್ರಶಾಂತ್ ಹವಾಲ್ದಾರ್ ನಿಕಟ ಪೂರ್ವ ಅಧ್ಯಕ್ಷ ಅಭಿಲಾಶ್. ಕಾರ್ಯದರ್ಶಿ ಸಂದೇಶ್ ಶೆಟ್ಟಿ. ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಡಿ ಕೋನ್ಹ
ಸಪ್ತಾಹ ದ ಸಭಾಪತಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಯುವ ಜೇಸಿ ಅಧ್ಯಕ್ಷೆ ಚಂದ್ರಿಕಾ ಇನ್ನಿತರರು ಉಪಸ್ಥಿತರಿದ್ದರು.