ಡೈಲಿ ವಾರ್ತೆ: 23/Sep/2023

ಗಿರಿಜಾ ಸರ್ಜಿಕಲ್ಸ್ ನಲ್ಲಿ ಸಮಾಜ ಸೇವಕಿ ಶ್ರೀಮತಿ ಆಯಿಷಾ ಬಾನು ಅವರಿಗೆ ಸನ್ಮಾನ

ಕುಂದಾಪುರ: ಗಿರಿಜಾ ಸರ್ಜಿಕಲ್ಸ್ ಕುಂದಾಪುರದ ಪ್ರಯೋಜಕತ್ವದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಮತ್ತು ಮಂಥನ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಖ್ಯಾತ ನಿರೂಪಕ ಅವಿನಾಶ್ ಕಾಮತ್ ಅವರ ಸೈ0ಯೋಜಿತ ಕೂತು ಮಾತಾಡುವ ಕಾರ್ಯಕ್ರಮ ಸೆ. 16 ರಂದು ಶನಿವಾರ ಸಂಜೆ 6 ಗಂಟೆಗೆ ನಡೆಯಿತು.

ಈ ಸಂದರ್ಭದಲ್ಲಿ ಕುಂದಾಪುರ ದವರೇ ಆದ ಕಾರ್ಕಳದಲ್ಲಿ ಉಚಿತ ಅನಾಥಾಶ್ರಮ ನಡಿಸುತಿರುವ ಬಡವರ, ನಿರ್ಗತಿಕರ, ಅನಾಥರ ಪಾಲಿನ ತಾಯಿ ಶ್ರೀಮತಿ ಆಯಿಷಾ ಬಾನು ಅವರನ್ನು ಎಲ್ಲಾ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಿ ಸಣ್ಣ ಮಟ್ಟದ ಆರ್ಥಿಕ ಸಹಾಯ ವನ್ನೂ ನೀಡಲಾಯಿತು. ಈ ಸಂದರ್ಭದಲ್ಲಿ ಕೂತು ಮಾತಾಡುವ ಸರಣಿ ಕಾರ್ಯಕ್ರಮದ ಉದ್ಘಾಟಕರಾಗಿ ಬಂದಿರುವ ಎ. ಎಸ್ . ಎನ್. ಹೆಬ್ಬಾರ್. ಹಿರಿಯ ಸಾಹಿತಿ ಮತ್ತು ನ್ಯಾಯವಾದಿಗಳು ಕುಂದಾಪುರ. ಗಿರಿಜಾ ಗ್ರೋಪ್ ಆಪ್ ಕಾನ್ಸರ್ನ್ಸ್ ನ ರವೀಂದ್ರ ಶೆಟ್ಟಿ , ಸುರೇಖಾ ರವೀಂದ್ರ ಶೆಟ್ಟಿ , ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಮತ್ತು ಮಂಥನ ಸಂಸ್ಥೆ ಕುಂದಾಪುರದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಮತ್ತು ಕೂತು ಮಾತಾಡುವ ಕಾರ್ಯಕ್ರಮ ದ ರೂವಾರಿ ಅವಿನಾಶ್ ಕಾಮತ್ ಉಪಸ್ಥಿತರಿದ್ದರು.