ಡೈಲಿ ವಾರ್ತೆ:23 ಸೆಪ್ಟೆಂಬರ್ 2023

ಶಾರ್ಟ್ ಸರ್ಕ್ಯೂಟ್’ನಿಂದ ನಡು ರಸ್ತೆಯಲ್ಲಿ ಹೊತ್ತಿ ಉರಿದ ಕಾರು – ಪ್ರಯಾಣಿಕರು ಪಾರು!

ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್’ನಿಂದ ಕಾರು ರಸ್ತೆ ಮಧ್ಯೆಯೇ ಸುಟ್ಟು ಕರಕಲಾದ ಘಟನೆ ಕೊಪ್ಪ ತಾಲೂಕಿನ ಕುದುರೆಗುಂಡಿಯಲ್ಲಿ ನಡೆದಿದೆ.

ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಬೆಂಕಿ ಕಂಡ ತಕ್ಷಣ ಕಾರನಿಂದ ಇಳಿದು ಪಾರಾಗಿದ್ದಾರೆ. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ
ಬೆಂಕಿಯ ತೀವ್ರತೆಯಿಂದ ಕಾರು ಸುಟ್ಟು ಕರಕಲಾಗಿದೆ.