ಡೈಲಿ ವಾರ್ತೆ: 24/Sep/2023

ಲಕ್ಷ್ಮೇಶ್ವರ: ಸ. ಮಾ. ಪ್ರಾ. ಶಾಲೆಯಲ್ಲಿ ಶಿಕ್ಷಕರ ಬಿಳ್ಕೊಡಿಗೆ ಹಾಗೂ ಸ್ವಾಗತ ಸಮಾರಂಭ

ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಬಿಳ್ಕೊಡಿಗೆ ಹಾಗೂ ಸ್ವಾಗತ ಸಮಾರಂಭ ನಡೆಯಿತು.

ಅಧ್ಯಕ್ಷತೆ ಶಂಭುಲಿಂಗ ಕಟ್ಟಿಮನಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಈಶ್ವರ ಮೆಡ್ಲೇರಿ ಮಾತನಾಡಿ ಶಿಕ್ಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು. ವರ್ಗಾವಣೆಗೊಂಡ ದೈಹಿಕ ಶಿಕ್ಷಕರಾದ ಮಂಜುನಾಥ ಚಾಕಲಬ್ಬಿ ಇವರನ್ನು ಸನ್ಮಾನಿಸಲಾಯಿತು.

ನೂತನವಾಗಿ ಶಾಲೆಗೆ ಹಾಜರಾದ ತಿಪ್ಪಾ ನಾಯಕ್ ಗುರುಗಳನ್ನು ಸ್ವಾಗತಿಸಲಾಯಿತು. ಜಿ ಬಿ ರಾಮಗೇರಿ ಪರಶುರಾಮ ಕೊರ್ವರ್ ಎನ್ ಎಂ ಬರಮಗೌಡ್ರು ಎಸ್ ಬಿ ಅಣ್ಣಿಗೇರಿ ಈರಣ್ಣ ಅರಳಿಹಳ್ಳಿ ಎನ್‌ ಬಿ ಪಶುಪತಿಹಾಳ್ ಆರ್ ಡಿ ಕಲಾಯಗಾರ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಆರ್ ಎಪ್ ಕಪ್ಪತ್ತನವರ ಹಾಗೂ ದೀಪಾ ಭಸ್ಮೆ ನಿರ್ವಹಿಸಿದರು.