ಡೈಲಿ ವಾರ್ತೆ:29 ಸೆಪ್ಟೆಂಬರ್ 2023

ಆಲದಪದವು : ಪ್ರವಾದಿ ಮಹಮ್ಮದ್ ಮುಸ್ತಾಫ (ಸ .ಅ.)ರ ಜನ್ಮ ದಿನಾಚರಣೆ.

ಬಂಟ್ವಾಳ : ಆಲದಪದವು ನೂರುಲ್ ಇಸ್ಲಾಂ ಮದರಸ ಮತ್ತು ಅಲ್ ಮಸ್ಜಿದುಲ್ ಬದ್ರಿಯ ಇದರ ವತಿಯಿಂದ ಅಂತ್ಯ ಪ್ರವಾದಿ ಮಹಮ್ಮದ್ ಮುಸ್ತಾಫ (ಸ .ಅ.)ರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಮಸೀದಿ ಅದ್ಯಕ್ಷ ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಮಸೀದಿ ಖತೀಬ್ ಅಝಿಝ್ ಅಮ್ಜದಿ ಉದ್ಘಾಟಿಸಿದರು.

ಮಾವಿನಕಟ್ಟೆ ಬದ್ರಿಯ ಜುಮಾ ಮಸೀದಿ ಅದ್ಯಕ್ಷ ಅಬ್ದುಲ್ ರಝಾಕ್ ಎಲ್ಪೆಲ್, ಆದಂ ಆಲದಪದವು, ಪುತ್ತುಮೋನು ನಡಾಯಿ, ಅಬ್ಬು ನಡಾಯಿ, ಸಿರಾಜ್ ಬಸ್ತಿಕೋಡಿ, ಇಮ್ರಾನ್ ಬಸ್ತಿಕೋಡಿ, ಅಬ್ದುಲ್ ರಹಿಮಾನ್ ಮದನಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿದ್ದರು.

ಇದೇ ವೇಳೆ ಮದರಸ ವಿಧ್ಯಾರ್ಥಿಗಳಿಂದ ವಿವಿದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಗೂ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮಸೀದಿ ಇಮಾಮ್ ಹುಸ್ಯೆನ್ ಸಹದಿ ಸ್ವಾಗತಿಸಿ, ರಿಯಾಝ್ ಬಸ್ತಿಕೋಡಿ ಕಾರ್ಯಕ್ರಮ ನಿರೊಪಿಸಿದರು