ಡೈಲಿ ವಾರ್ತೆ: 30/OCT/2023

ಕೋಟ: ಹುಲಿಜೇನು ದಾಳಿ – ಮೆಸ್ಕಾಂ ಗುತ್ತಿಗೆ ಡ್ರೈವರ್ ಸಂಪತ್ ಕುಮಾರ್ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು.!

ಕೋಟ: ಕೋಟ ಮೆಸ್ಕಾಂ ಗುತ್ತಿಗೆ ಆಧಾರದಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂಪತ್ ಕುಮಾರ್ ಅವರಿಗೆ ಹುಲಿಜೇನು ಕಚ್ಚಿ ಕುಂದಾಪುರದ ಸರಕಾರಿ ಅಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.

ಕೆಲಸದ ನಿಮಿತ್ತ ಮದುವನ ಹತ್ತಿರ ಲೈನ್ ವಯರಿಗೆ ತಾಗಿಕೊಂಡಿದ್ದ ಮರವನ್ನು ಕಡಿಯಲು ಮೆಸ್ಕಾಂ ಪಿಕಪ್ ಗಾಡಿಯಲ್ಲಿ ಮಾರ್ಗದಾಳುಗಳನ್ನು ಕರೆದುಕೊಂಡು ಹೋಗಿದ್ದ ಸಂಪತ್ ಅವರು ಮಾರ್ಗದಾಳು ಗಳನ್ನು ಕೆಳಗೆ ಇಳಿಸಿ ಪಿಕಪ್ ಗಾಡಿಯ ಪಕ್ಕದಲ್ಲೆ ನಿಂತಿದ್ದರು. ಮಾರ್ಗದಾಳು ಗಳು ಕಡಿದ ಮರದಲ್ಲಿ ಹುಲಿಜೇನು ಗೂಡುಕಟ್ಟಿದ್ದು ಆ ಮರವನ್ನು ಕಡಿದ್ದುದರಿಂದ ಅದರಲ್ಲಿದ್ದು ಗೂಡು ಬಿದ್ದು ಜೇನು ಸಂಪತ್ ಅವರಿಗೆ ಮತ್ತು ಮಾರ್ಗದಾಳು ಯಲ್ಲಪ್ಪನಿಗೆ ಕಚ್ಚಿದರಿಂದ ಗಂಭೀರ ಗಾಯಗೊಂಡ ಸಂಪತ್ ನನ್ನು ತಕ್ಷಣ ಕೋಟ ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಕುಂದಾಪುರ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಯಿತು.