ಡೈಲಿ ವಾರ್ತೆ: 29/NOV/2023

ನೆಟ್ಲಮುಡ್ನೂರು : ಬಂಟ್ವಾಳ ಶಾಸಕರಿಂದ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ಏಮಾಜೆಯಲ್ಲಿ ರೂ 50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬುಧವಾರ ಉದ್ಘಾಟಿಸಿದರು.

ಮಿತ್ತೂರು – ಏಮಾಜೆ ರಸ್ತೆ ಅಭಿವೃದ್ಧಿಗೆ ದ.ಕ.ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ 50 ಲಕ್ಷ ಅನುದಾನ ಒದಗಿಸಿದ್ದರು.

ಈ ಸಂದರ್ಭದಲ್ಲಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಕೀಲಾ ಕೆ.ಪೂಜಾರಿ, ಸದಸ್ಯರಾದ ಅಶೋಕ್ ರೈ, ಧನಂಜಯ ಗೌಡ, ಲತೀಫ್ ನೇರಳಕಟ್ಟೆ, ಸುಜಾತಾ ಪ್ರಮುಖರಾದ ಡಿ. ತನಿಯಪ್ಪ ಗೌಡ, ಈಶ್ವರ ಭಟ್, ನಾರಾಯಣ ಗೌಡ, ಸೋಮಶೇಖರ ಗೌಡ, ಲೋಕನಾಥ, ವೆಂಕಟೇಶ್, ಅನಿತಾ, ಚೇತನ್, ನಿತಿನ್, ಮೋಹಿನಿ ಗೌಡ, ಚಿದಾನಂದ, ಗಿರೀಶ್ ಗೌಡ ಬೆರ್ಕೊಡಿ ಮೊದಲಾದವರು ಉಪಸ್ಥಿತರಿದ್ದರು.