ಡೈಲಿ ವಾರ್ತೆ: 29/NOV/2023

ಸೂರಿಕುಮೇರು : ಕೆ.ಎಂ.ಜೆ, ಎಸ್‌.ವೈ‌.ಎಸ್, ಎಸ್ಸೆಸ್ಸೆಫ್ ಯುನಿಟ್ ವತಿಯಿಂದ ಬುರ್ದಾ ಮಜ್ಲಿಸ್ ಹಾಗೂ ಸುನ್ನೀ ಸಮ್ಮೇಳನ

ಬಂಟ್ವಾಳ : ಮನುಷ್ಯರು ತನ್ನ ಜೀವನದಲ್ಲಿ ದ್ವೇಷ , ಅಸೂಯೆ, ಮತ್ಸರಗಳಿಗೆ ಅವಕಾಶ ನೀಡದೇ ಪ್ರೀತಿ ಸ್ನೇಹ ವಿಶ್ವಾಸದಿಂದ ಬದುಕಿದರೆ ಆತನ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಹೇಳಿದರು.

ಅವರು ಕೆ.ಎಂ.ಜೆ, ಎಸ್‌.ವೈ‌.ಎಸ್ ಹಾಗೂ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಸೂರಿಕುಮೇರು ಜಂಕ್ಷನ್ ಬಳಿ ಮರ್‌ಹೂಂ ಇರ್ಶಾದ್ ಉಮ್ಮರ್ ವೇದಿಕೆಯಲ್ಲಿ ನಡೆದ ಬುರ್ದಾ ಮಜ್ಲಿಸ್ ಹಾಗೂ ಸುನ್ನೀ ಸಮ್ಮೇಳನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿ ಇದರ ಖತೀಬ್ ಮುಹಮ್ಮದ್ ಹನೀಫ್ ಸ‌ಅದಿ ಕುಂತೂರು ಕಾರ್ಯಕ್ರಮ ಉದ್ಘಾಟಿಸಿದರು .

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಕೊಡಾಜೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕೆ.ಮಾಣಿ, ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ಕೆ.ಬಾಲಕೃಷ್ಣ ಆಳ್ವ ಕೊಡಾಜೆ, ಸೂರಿಕುಮೇರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್‌ ಹಮೀದ್, ಕಾರ್ಯದರ್ಶಿ ಅಮೀರುದ್ದೀನ್, ಮಾಣಿ ದಾರುಲ್ ಇರ್ಶಾದ್ ಮುದರ್ರಿಸ್ ಯಾಕೂಬ್ ಸ‌ಅದಿ ಬೆಟ್ಟಂಪಾಡಿ, ಅಧ್ಯಾಪಕ ನಝೀರ್ ಅಮ್ಜದಿ ಸರಳಿಕಟ್ಟೆ, ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಸದರ್ ಮು‌ಅ‌ಲ್ಲಿಂ ಇಬ್ರಾಹಿಂ ರಝ್ವಿ, ಕೆಎಂಜೆ ಮಾಣಿ ಸರ್ಕಲ್ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಪ್ರಿನ್ಸಿಪಾಲ್ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಎಸ್‌ವೈ‌ಎಸ್ ಮಾಣಿ ಸರ್ಕಲ್ ಅಧ್ಯಕ್ಷ ಹೈದರ್ ಸಖಾಫಿ ಶೇರಾ, ಕೆಎಂಜೆ ಸೂರಿಕುಮೇರು ಯುನಿಟ್ ಉಸ್ತುವಾರಿ ಹಬೀಬ್ ಶೇರಾ, ಎಸ್ ಆರ್. ಸುಲೈಮಾನ್ ಸೂರಿಕುಮೇರು, ಸ್ವಾಗತ ಸಮಿತಿಯ ಚೆಯರ್‌ಮೆನ್ ಹನೀಫ್ ಸಂಕ, ಕನ್ವೀನರ್ ಹಸೈನಾರ್ ಸಂಕ, ಅಝೀಂ ಸೂರಿಕುಮೇರು,ಅಶ್ರಫ್ ಸಖಾಫಿ ಸೂರಿಕುಮೇರು, ಹಂಝ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು, ಅಬ್ದುಲ್‌ ಕರೀಂ ಸೂರಿಕುಮೇರು, ಖಾದರ್ ಅರ್ಕ ಕೊಡಿಪ್ಪಾಡಿ, ಎಸ್.ಎಸ್. ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು, ಇಮ್ರಾನ್ ಸೂರಿಕುಮೇರು, ಇಬ್ರಾಹಿಂ ಮುಸ್ಲಿಯಾರ್ ಮಾಣಿ, ಟೈಲರ್ ಹಸೈನ್ ಸೂರಿಕುಮೇರು, ಬದ್ರಿಯಾ ಮಸೀದಿ ಸೂರಿಕುಮೇರು ಅಧ್ಯಾಪಕರಾದ ಸವಾಝ್ ಹನೀಫಿ ಅಲ್ ಅಶ್‌ಅರಿ, ಸವಾದ್ ಮಾಣಿ, ದಾವೂದ್ ಕಲ್ಲಡ್ಕ, ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಂಚಿತವಾಗಿ ಮೌಲಿದ್ ಪಾರಾಯಣ ಮತ್ತು ಮಹ್‌ಳರತುಲ್ ಬದ್ರಿಯಾ ಬೈತ್ ಪಠಿಸಲಾಯಿತು, ಇದೇ ವೇಳೆ ಮುಫೀದ್ ಮಾಣಿ ಮತ್ತು ಅಜ್ಮಲ್ ಮಾಣಿ ಗೋಲ್ಡನ್ ಫಿಫ್ಟಿ ಗೀತೆ ಹಾಡಿದರು, ನೌರತುಲ್ ಮದೀನಾ ಕೆಜಿಎನ್ ಹಿಫ್ಳ್ ವಿದ್ಯಾರ್ಥಿಗಳಾದ ಮುಹ್ಸಿನ್ ಕುಂಬ್ರ, ಮತ್ತು ವಹೀದ್ ಚೆನ್ನಾರ್ ಮದ್‌ಹ್ ಗೀತೆ ಹಾಡಿದರು.

ಸಯ್ಯಿದ್ ತ್ವಾಹಾ ತಂಙಳ್ ಪೂಕೊಟೂರು ನೇತೃತ್ವದಲ್ಲಿ ಶಾಹಿನ್ ಬಾಬು ತಾನೂರು, ಇನ್ಸಾಫ್ ಅಬೂಬಕರ್ ನಾಸಿಫ್ ಕ್ಯಾಲಿಕಟ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಸಿಕೊಟ್ಟರು. ಅಸ್ಸಯ್ಯಿದ್ ಮುಹ್ಸಿನ್ ತಂಙಳ್ ದುಆ ನೆರವೇರಿಸಿದರು .

ಇಬ್ರಾಹಿಂ ಸಅದಿ ಮಾಣಿ ಪ್ರಸ್ತಾವನೆ ಗೈದು, ಇಸಾಕ್ ಸ‌ಅದಿ ಮಾಣಿ ಕಿರಾಅ‌ತ್ ಪಠಿಸಿದರು. ಮುಬಶ್ಶಿರ್ ಹಿಕಮಿ ಸ್ವಾಗತಿಸಿ, ಹಾರಿಸ್ ಮದನಿ ಪಾಟ್ರಕೋಡಿ ಮತ್ತು ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.