ಡೈಲಿ ವಾರ್ತೆ: 29/NOV/2023

ಬ್ರಹ್ಮಾವರ‌ ಬಸ್ ಡಿಕ್ಕಿ ‌ಬೈಕ್ ಸವಾರ‌ ಸಾವು

ಬ್ರಹ್ಮಾವರ: ಬ್ರಹ್ಮಾವರ ತಾಲ್ಲೂಕು ವಾರಂಬಳ್ಳಿ ಗ್ರಾಮದ ಬೇಳೂರುಜೆಡ್ಡು ಕ್ರಾಸ್‌ ಬಳಿ, ರಾ.ಹೆ 66 ರಲ್ಲಿ ವೇಗದೂತ ಬಸ್ಸೊಂದು ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ‌ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ‌ ನಡೆದಿದೆ.

ಮೃತ ರನ್ನು ಪ್ರೀತಮ್ ಅಂತೋನಿ‌ ಡಿಸಿಲ್ವ ಎಂದು ಗುರುತಿಸಲಾಗಿದೆ.
ಕುಂದಾಪುರ ಕಡೆಯಿಂದ‌ ಅತಿ ವೇಗದಿಂದ ಬಂದ ಬಸ್ಸು ಮುಂದೆ ಹೋಗುತ್ತಿದ್ದ ಪ್ರೀತಮ್ ಅವರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಡಿಗೆ ಬಿದ್ದ ಅವರು ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದರೂ, ಅದಾಗಲೇ ಮೃತಪಟ್ಟಿದ್ದರು. ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಮಧು ಬಿ.ಇ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.