ಡೈಲಿ ವಾರ್ತೆ: 02/Feb/2024

ಖ್ಯಾತ ಹುಲಿವೇಷದಾರಿ ಕಾಡುಬೆಟ್ಟು ಅಶೋಕ್ ರಾಜ್‌ ನಿಧನ

ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಹುಲಿವೇಷದಾರಿ ಅಶೋಕ್ ರಾಜ್ ನಿಧನರಾಗಿದ್ದಾರೆ.

ಅಶೋಕ್ ರಾಜ್ ಅವರು ಉಡುಪಿಯ ಕಾಡುಬೆಟ್ಟು ನಿವಾಸಿ. ಉಡುಪಿ ಅಷ್ಟಮಿ ಹಾಗೂ ವಿಟ್ಲಿಪಿಂಡಿಯ ವೇಳೆ ಹುಲಿ ವೇಷ ಧರಿಸಿ ಪ್ರಸಿದ್ಧಿಯನ್ನು ಪಡೆದಿದ್ದರು. ಅಷ್ಟೇ ಅಲ್ಲದೇ, ಇವರು ಕಾಡಬೆಟ್ಟು ಹುಲಿವೇಷ ತಂಡವನ್ನು ಕಟ್ಟಿದ್ದರು.