ಡೈಲಿ ವಾರ್ತೆ: 28/Mar/2024

ಹಿರಿಯ ಆಟೋ ಚಾಲಕ ಅರಂಗಳ ಯೂಸುಫ್(68) ಹೃದಯಾಘಾತದಿಂದ ನಿಧನ

ಬಂಟ್ವಾಳ : ಮೂಲತಃ ಅನಂತಾಡಿ ಗ್ರಾಮದ ಆರಂಗಳ ನಿವಾಸಿಯಾಗಿರುವ ಪ್ರಸ್ತುತ ಕೊಳ್ನಾಡು ಗ್ರಾಮದ ಕುಡ್ತಮುಗೇರು ನಿವಾಸಿ ಹಿರಿಯ ಆಟೋ ಚಾಲಕ ಅರಂಗಳ ಯೂಸುಫ್ (68) ಹೃದಯಾಘಾತದಿಂದ ಗುರುವಾರ ಬೆಳಗ್ಗೆ ನಿಧನರಾದರು.

    ಬುಧವಾರ ರಾತ್ರಿ ತನ್ನ ಮನೆಯಲ್ಲಿ ಅಸ್ವಸ್ಥರಾಗಿ ಕುಸಿದುಬಿದ್ದ ಯೂಸುಫ್ ಅವರನ್ನು ತಕ್ಷಣವೇ  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಗುರುವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

   ಮೃತರು ಇಬ್ಬರು ಪತ್ನಿಯರು, ಐವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಸಂತಾಪ : ಕೊಳ್ನಾಡು ಗ್ರಾಮದ ಕುಡ್ತಮುಗೇರು ಆಟೋ ಚಾಲಕ-ಮಾಲಕ ಸಂಘದ ಮಾಜಿ ಪದಾಧಿಕಾರಿಯಾಗಿದ್ಜ ಯೂಸುಫ್ ನಿಧನ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಒಂದು ಗಂಟೆ ಕಾಲ ಆಟೋ ಚಾಲಕರು ಸ್ಥಗಿತಗೊಳಿಸಿ ಸಂತಾಪ ವ್ಯಕ್ತಪಡಿಸಲಿದ್ದಾರೆ.