ಡೈಲಿ ವಾರ್ತೆ: 14/April/2024

ಸಿನಿಮಾ ನಿರ್ಮಾಪಕ‌ ಸೌಂದರ್ಯ ಜಗದೀಶ್ ಆತ್ಮಹತ್ಯೆ!

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ‌ ಸಿನಿಮಾ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಮನೆಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬಸ್ಥರ ಹೇಳಿಕೆ‌ ಪಡೆದು ಮುಂದಿನ ಕಾನೂನು ಕ್ರಮ‌ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು.

ಸಿನಿಮಾ ನಿರ್ಮಾಪಕರಾಗಿದ್ದ ಇವರು ಅಪ್ಪು‌ ಮತ್ತು ಪಪ್ಪು, ಮಸ್ತ್ ಮಜಾ ಮಾಡಿ, ರಾಮ್‌ಲೀಲಾ, ಸ್ನೇಹಿತರು ಹಾಗೂ ಇತರೆ ಸಿನಿಮಾ‌ ನಿರ್ಮಿಸಿದ್ದರು.

ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಜೆಟ್‌ಲಾಗ್ ರೆಸ್ಟೊ ಬಾರ್ ಸಹ ನಡೆಸುತ್ತಿದ್ದರು. ನಟ‌ ದರ್ಶನ್ ಅಭಿನಯದ ಕಾಟೇರ್ ಸಿನಿಮಾ‌ ಬಿಡುಗಡೆ ಸಂದರ್ಭದಲ್ಲಿ ಇದೇ ಬಾರ್‌ನಲ್ಲಿ ರಾತ್ರಿ‌ ಪಾರ್ಟಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು,ರೆಸ್ಟೊ ಬಾರ್ ಬಂದ್ ಮಾಡಿಸಿದ್ದರು. ಜೊತೆಗೆ, ಸೌಂದರ್ಯ ‌ಜಗದೀಶ್ ಹಾಗೂ‌ ಪತ್ನಿ ವಿರುದ್ಧ ನ್ಯಾಯಾಲಯಕ್ಕೆ ‌ದೋಷಾರೋಪ‌ ಪಟ್ಟಿ ಸಲ್ಲಿಸಿದ್ದರು

‘ಹಣಕಾಸು ವ್ಯವಹಾರ‌ದಿಂದ ಆರ್ಥಿಕ‌ ಸಂಕಷ್ಟಕ್ಕೆ‌ ಸಿಲುಕಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿ ಇದೆ.‌ ಸಾವಿನ ಬಗ್ಗೆ ತನಿಖೆ‌ ಮುಂದುವರಿಸಲಾಗಿದೆ’‌ ಎಂದು ಪೊಲೀಸರು‌ ಹೇಳಿದರು.