ಡೈಲಿ ವಾರ್ತೆ: 22/April/2024

ಕೋಟ: ಲೋಕಸಭಾ ಚುನಾವಣೆ ಹಿನ್ನಲೆ ಪೊಲೀಸರಿಂದ ಪೇಟೆಯಲ್ಲಿ ಪಥ ಸಂಚಲನ

ಕೋಟ: ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಕೋಟ  ಪೊಲೀಸ್ ಸಿಬಂದಿಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬಂಧಿಗಳು ಸೋಮವಾರ ಸಂಜೆ ಪಥ ಸಂಚಲನ ನಡೆಸಿದರು.

ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು   ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ದಿವಾಕರ್ ಮತ್ತು ಕೋಟ ಠಾಣಾಧಿಕಾರಿ ತೇಜಸ್ವಿ, ಅಪರಾಧ ವಿಭಾಗದ ಎಸ್ಐ ಸುಧಾ ಪ್ರಭು ಇವರ ನೇತೃತ್ವದಲ್ಲಿ ಕೋಟ ಠಾಣೆಯ ಸಿಬ್ಬಂದಿಗಳು ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಿಂದ ಕೋಟ ಠಾಣೆಯಿಂದ ಆರಂಭಗೊಂಡು  ಕೋಟ ಪೇಟೆ ಮಾರ್ಗವಾಗಿ ಅಮೃತೇಶ್ವರಿ ದೇವಸ್ಥಾನದ ವರೆಗೆ ಪಥ ಸಂಚಲನ ನಡೆಯಿತು.