ಡೈಲಿ ವಾರ್ತೆ: 23/April/2024

ಮೆಲ್ಕಾರ್ : ದ.ಕ.ಜಿಲ್ಲಾ ಬೀಡಿ ಮಾಲಕರ ಸಂಘದ ಕಛೇರಿ ಉದ್ಘಾಟನೆ

ಬಂಟ್ವಾಳ  : ದ.ಕ. ಜಿಲ್ಲಾ ಬೀಡಿ ಮಾಲಕರ ಸಂಘದ ನೂತನ ಕಛೇರಿಯು ಸೋಮವಾರ ಮೆಲ್ಕಾರ್ ನ ಗೋಲ್ಡನ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು.

ದ.ಕ.ಜಿಲ್ಲಾ ಬೀಡಿ ಮಾಲಕರ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ನೂತನ ಕಛೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಬೀಡಿ ಮಾಲಕರು ಒಗ್ಗಟ್ಟಾಗಿ ನಮ್ಮ ಸಮಸ್ಯೆಯನ್ನು ಬಗೆಹರಿಸಲು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.

   ಇದೇ ವೇಳೆ ಕಛೇರಿಗೆ ಸ್ಥಳದಾನ ಮಾಡಿದ ಹಜಾಜ್ ಸಮೂಹ ಸಂಸ್ಥೆಗಳ ಪಾಲುದಾರ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಅವರನ್ನು ಅಭಿನಂದಿಸಲಾಯಿತು.

    ಬೀಡಿ ಮಾಲೀಕರುಗಳಾದ ಸಿಂಗಾರಿ ಬೀಡಿಯ ಸುಲೈಮಾನ್ ಹಾಜಿ,  ಪ್ರೀತಿ ಬೀಡಿಯ ಪ್ರಶಾಂತ, ಕೆ.ಎಸ್.ಬೀಡಿಯ ಮುಸ್ತಫಾ, ಸುಲ್ತಾನ್ ಬೀಡಿಯ ಮುಹಮ್ಮದ್ ರಫೀಕ್ ಹಾಜಿ, ನೂತನ್ ಬೀಡಿಯ ಗಂಗಾಧರ, ಯುನೈನ್ ಬೀಡಿಯ ಅಹ್ಮದ್ ಖಾನ್, ಜ್ಯೋತಿ ಬೀಡಿಯ ರಾಘವ ಸಪಲ್ಯ, ಅಲಂಕಾರ್ ಬೀಡಿಯ ಯೂಸುಫ್ ಹಾಜಿ, ಎ.ಒನ್.ಬೀಡಿಯ ಬಿ.ಎಸ್.ಮುಹಮ್ಮದ್, ಶ್ರೀ ದೇವಿ ಬೀಡಿಯ ನಾರಾಯಣ, ನ್ಯೂ ರಾಣಿ ಬೀಡಿಯ ರಿಯಾಝ್ ಮೊದಲಾದವರು ಉಪಸ್ಥಿತರಿದ್ದರು.

    ಸಂಘದ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಗೋಳ್ತಮಜಲು ಸ್ವಾಗತಿಸಿ, ಕೋಶಾಧಿಕಾರಿ ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ವಂದಿಸಿದರು.