ಡೈಲಿ ವಾರ್ತೆ: 01/ಮೇ /2024

ಬ್ರಹ್ಮಾವರ: CNG ಗ್ಯಾಸ್ ಕೊರತೆ ಆಟೋ ಚಾಲಕರ ಪರದಾಟ – ಶಾಶ್ವತ ಪರಿಹಾರ ನೀಡದಿದ್ದರೆ ನಾಳೆ ಜಿಲ್ಲಾಡಳಿತ ವಿರುದ್ದ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಬ್ರಹ್ಮಾವರ:ಉಡುಪಿ ಜಿಲ್ಲೆಯಲ್ಲಿ ಹಲವು ದಿನಗಳಿಂದ  CNG ಗ್ಯಾಸ್ ಪೂರೈಕೆ ಸರಿಯಾಗಿ ನೀಡದಿರುವುದರಿಂದ ಆಟೋ ಚಾಲಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಹಲವು ದಿನಗಳಿಂದ ಆಟೋ ಚಾಲಕರು CNG ಗ್ಯಾಸ್ ಗಾಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅನ್ನ,ನೀರು,ನಿದ್ದೆ ಬಿಟ್ಟು ಸಾಲುಗಟ್ಟಿ ನೂರಾರು ಆಟೋ ರಿಕ್ಷಾಗಳೊಂದಿಗೆ ಕಾಯುತ್ತಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಇವರ ಬಗ್ಗೆ ಗಮನ ಹರಿಸದೆ ಇರುವುದು ವಿಪರ್ಯಾಸವಾಗಿದೆ.


ಇಂದು ಆಟೋ ಚಾಲಕರನ್ನು ಭೇಟಿ ಮಾಡಿದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ:
ದಿನೇಶ್ ಗಾಣಿಗ ಇವರು ಇಂದು ಆಟೋ ಚಾಲಕರನ್ನು ಭೇಟಿ ಮಾಡಿ ಅವರ ಸಂಕಷ್ಟವನ್ನು ತಿಳಿದುಕೊಂಡರು.

ಆಟೋ ಚಾಲಕರಿಂದ ನಾಳೆ ಜಿಲ್ಲಾಡಳಿತ ವಿರುದ್ಧ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ:
ನಾಳೆ ಬೆಳಿಗ್ಗೆ 10 ಗಂಟೆ ಒಳಗೆ CNG ಗ್ಯಾಸ್ ಪೂರೈಕೆ ನೀಡಿ ಆಟೋ ಚಾಲಕ ಸಂಕಷ್ಟವನ್ನು ಪರಿಹರಿಸದಿದ್ದಲ್ಲಿ ಎಲ್ಲಾ ಆಟೋ ಚಾಲಕರು ಸೇರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ದಿನೇಶ್ ಗಾಣಿಗ ಎಚ್ಚರಿಸಿದ್ದಾರೆ.