ಡೈಲಿ ವಾರ್ತೆ: 27/ಮೇ /2024

ಚಿಕ್ಕಮಗಳೂರು: ಬೈಕ್–ಕ್ಯಾಂಟರ್ ನಡುವೆ ಅಪಘಾತ: ಯುವಕ ಸಾವು, ನಾಲಿಗೆ ಕಳೆದುಕೊಂಡ ಯುವತಿ

ಚಿಕ್ಕಮಗಳೂರು: ಬೈಕ್-ಕ್ಯಾಂಟರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಇದ್ದ ಯುವತಿಯ ನಾಲಿಗೆ ಕಟ್ ಆಗಿ ಗಂಭೀರ ಗಾಯಗೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ನಡೆದಿದೆ.

ಶಿವರಾಜ್(26) ಮೃತ ದುರ್ದೈವಿ, ಲಾವಣ್ಯ(20) ನಾಲಿಗೆ ಕಳೆದುಕೊಂಡ ಯುವತಿ.
ಲಾವಣ್ಯ ಹಾಗೂ ಶಿವರಾಜ್‌ ಬೈಕ್‌ ನಲ್ಲಿ ಹೋಗುತ್ತಿರಬೇಕಾದರೆ ಎದುರು ಕಡೆಯಿಂದ ಬಂದ ಕ್ಯಾಂಟರ್‌ ಗೆ ಮುಖಾಮುಖಿ ಢಿಕ್ಕಿ ಆಗಿದೆ ಎಂದು ತಿಳಿದು ಬಂದಿದೆ.
ಶಿವರಾಜ್-ಲಾವಣ್ಯ ಇಬ್ಬರು  ಅರಸೀಕೆರೆ ತಾಲೂಕಿನ ಬಂದೂರು ಮೂಲದವರು. ಲಾವಣ್ಯ ಚಿಕ್ಕಮಗಳೂರಿನ ವಿದ್ಯಾರ್ಥಿ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದಾರೆ.

ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.