ಡೈಲಿ ವಾರ್ತೆ: 28/ಮೇ /2024

ವಿಧಾನ ಪರಿಷತ್ ಚುನಾವಣೆ : ಕಾಂಗ್ರೆಸ್ ಬೆಂಬಲಿಸಲು ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಮನವಿ.

ಜೂನ್ 3 ರಂದು ನೆಡೆಯುವ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪದವೀಧರ ಅಭ್ಯರ್ಥಿ ಶ್ರೀ ಆಯನೂರು ಮಂಜುನಾಥ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ. ಕೆ. ಕೆ. ಮಂಜುನಾಥ ಕುಮಾರರವರಿಗೆ  ಪ್ರಥಮ ಪ್ರಾಶ್ಯಾಸ್ತ್ಯದ ಮತ ನೀಡುವಂತೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ವಿನಂತಿಸಿದ್ದಾರೆ.

ಡಾ ಕೆ.ಕೆ. ಮಂಜುನಾಥ ಕುಮಾರರವರು ಶಿಕ್ಷಕರಾಗಿದ್ದು 2 ಬಾರಿ ಸ್ಪರ್ದಿಸಿ ಕಡಿಮೆ ಅಂತರದಲ್ಲಿ ಸೋತಿದ್ದರೂ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು , ಶಿಕ್ಷಕರ ಮತ್ತು ಶಿಕ್ಷಣ ಕ್ಷೇತ್ರದ ಸಮಸೈೆಗಳ ಬಗ್ಗೆ ನಿರಂತರ ಹೋರಾಟ ಮಾಡಿದವರು . ಶ್ರೀ ಆಯನೂರು ಮಂಜುನಾಥರವರು ವಿಧಾನ ಪರಿಷತ್ ಸದಸ್ಯರಾಗಿ , ಶಾಸಕರಾಗಿ , ರಾಜ್ಯಸಭಾ ಸದಸ್ಯರಾಗಿ , ಲೋಕಸಭಾ ಸದಸ್ಯರಾಗಿ ಜನಪರ ಕೆಲಸ ಮಾಡಿ ಅಪಾರ ಅನುಭವವಿರುವ ವ್ಯಕ್ತಿ . ಇಬ್ಬರು ಕೂಡಾ ತಾವು ಪ್ರತಿನಿಧಿಸಿದ ಕ್ಷೇತ್ರಕ್ಕೆ ನ್ಯಾಯ ಕೊಡಲು ಸಮರ್ಥ ಅಭ್ಯರ್ಥಿಗಳು .

ಕಾಂಗ್ರೆಸ್ ಬೆಂಬಲಿತ ಇಬ್ಬರು ಅಭ್ಯರ್ಥಿಗಳನ್ನು ಬೆಂಬಲಿಸುವಂತೆ 2 ಕ್ಷೇತ್ರದ ನೈರುತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಮತದಾರರನ್ನು ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ವಿನಂತಿಸಿದ್ದಾರೆ.