ಡೈಲಿ ವಾರ್ತೆ: 21/ಜೂ./2024

ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಕಾಟಿಪಳ್ಳ ವಾರ್ಡ್ ಸಮಿತಿ ವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನಾ ದಿನಾಚರಣೆ

ಕಾಟಿಪಳ್ಳ: ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಕಾಟಿಪಳ್ಳ ವಾರ್ಡ್ ಸಮಿತಿ ವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ “ದ್ವಜಾರೋಹಣ ಕಾರ್ಯಕ್ರಮ”ವು ಕಾಟಿಪಳ್ಳ ವಾರ್ಡ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅಥಿತಿಗಳಾಗಿ ಎಸ್.ಡಿ.ಪಿ.ಐ ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಸದಸ್ಯರಾದ ಇರ್ಫಾನ್ ಕಾನ, ಸುರತ್ಕಲ್ ಬ್ಲಾಕ್ ಅಧ್ಯಕ್ಷರಾದ ಸಲಾಂ ಕಾನ, ವಾರ್ಡ್ ಕಾರ್ಯದರ್ಶಿ ಝ್ಯೆನುದ್ದೀನ್ ಕಾಟಿಪಳ್ಳ, ಹಿರಿಯರಾದ ಕೆ.ಹಸನಬ್ಬ, ಅಬ್ದುಲ್ಲಾ ರವರು ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಬೂತ್ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಮತ್ತು ಸಾರ್ವಜನಿಕರು ಪಾಲ್ಗೊಂಡು ಸಿಹಿ ತಿಂಡಿ ವಿತರಿಸಿ ಸಂಭ್ರಾಮಾಚರಿಸಿದರು.ಕಾಟಿಪಳ್ಳ ವಾರ್ಡ್ ಜೊತೆ ಕಾರ್ಯದರ್ಶಿ ನಿಶಾದ್ ಕಾಟಿಪಳ್ಳ ನಿರೂಪಣೆಗೈದು ಕೊನೆಗೆ ವಂದಿಸಿದರು.