ಡೈಲಿ ವಾರ್ತೆ: 21/ಜೂ./2024

ಮೂಡುಶೆಡ್ಡೆ ಗ್ರಾಮ ಸಮಿತಿಯಿಂದ SDPI ಪಕ್ಷದ 16ನೇ ವರ್ಷದ ಸಂಸ್ಥಾಪನಾ ದಿನಾಚರಣೆ

ಮಂಗಳೂರು: ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಡುಶೆಡ್ಡೆ ಗ್ರಾಮ ಸಮಿತಿ ವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ “ದ್ವಜಾರೋಹಣ ಕಾರ್ಯಕ್ರಮ”ನಡೆಯಿತು.

ಎಸ್.ಡಿ.ಪಿ.ಐ ಮೂಡುಶೆಡ್ಡೆ ಗ್ರಾಮ ಸಮಿತಿ ಅಧ್ಯಕ್ಷರಾದ ಇಕ್ಬಾಲ್ AP ದ್ವಜಾರೋಹನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೂಡುಶೆಡ್ಡೆ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್, ವುಮನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾ ಕಾರ್ಯದರ್ಶಿಯಾದ ನಿಶಾ ವಾಮಂಜೂರು, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಸದಸ್ಯರಾದ ಸಾಜುದ್ದೀನ್ ಎದುರುಪದವು, ವಾಮಂಜೂರು ವಾರ್ಡ್ ಅಧ್ಯಕ್ಷರಾದ ಹಾಕೀಫ್ ರಾಝಿ ವಾಮಂಜೂರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾದ ಅಝರ್ ಉಲೈಬೆಟ್ಟು, ಅಡ್ಯಾರ್ ಬ್ಲಾಕ್ ಕಾರ್ಯದರ್ಶಿಯಾದ ಫೈಝಲ್ ಮಲ್ಲೂರು, ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ ಎದುರುಪದವು ಅಧ್ಯಕ್ಷರಾದ ಇಕ್ಬಾಲ್ (ಮಯ್ಯದ್ದಿ) ಮತ್ತು ಊರಿನ ಗಣ್ಯ ವ್ಯಕ್ತಿಗಳು ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಬ್ಲಾಕ್, ಗ್ರಾಮ , ವಾರ್ಡ್, ಬೂತ್ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಮತ್ತು ಸಾರ್ವಜನಿಕರು ಪಾಲ್ಗೊಂಡು ಸಿಹಿ ತಿಂಡಿ ವಿತರಿಸಿ ಸಂಭ್ರಾಮಾಚರಿಸಿದರು.ಈ ಸಂಧರ್ಭದಲ್ಲಿ ಹಾಜಿ ಹನೀಫ್ ಮುಸ್ಲಿಯಾರ್, ಇಕ್ಬಾಲ್ AP ಹಾಗೂ ರಝಾಕ್ ಇವರಿಗೆ ಸನ್ಮಾನ ಮಾಡಲಾಯಿತು.