ಡೈಲಿ ವಾರ್ತೆ: 21/ಜೂ./2024

ಬೈಕ್​​​ಗೆ ಲಾರಿ ಡಿಕ್ಕಿ : 3 ವರ್ಷದ ಮಗು ಸಾವು, ತಂದೆ-ತಾಯಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಹೆದ್ದಾರಿಯಲ್ಲಿ ಬೈಕ್ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತವಾಗಿದ್ದು ತಂದೆ ಆಂಜಿನೇಯ-ತಾಯಿ ಮಮತಾ ಎಂಬುವವರಿಗೆ ಗಂಭೀರ ಗಾಯವಾದರೆ, ಮೂರು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗೇಟ್ ಬಳಿ ನಡೆದಿದೆ.

ಮೃತ ಮಗು ಧನ್ವಿತ್(3) ಎಂದು ತಿಳಿದುಬಂದಿದೆ.

ಅಪಘಾತ ಮಾಡಿ ಲಾರಿಯನ್ನು ಚಾಲಕ ಒಂದು ಕಿ.ಮೀ ದೂರ ಚಲಿಸಿಕೊಂಡು ಹೋಗಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.