ಡೈಲಿ ವಾರ್ತೆ: 22/ಜೂ./2024

ಕಮಲಶಿಲೆ ದೇವಸ್ಥಾನದಲ್ಲಿ ಗೋಕಳ್ಳತನಕ್ಕೆ ಯತ್ನಿಸಿದ ಪ್ರಕರಣ: ಆರೋಪಿಗಳ ಬಂಧನ

ಶಂಕರನಾರಾಯಣ: ಇಲ್ಲಿನ ಇತಿಹಾಸ ಪ್ರಸಿದ್ದ ಕಮಲಶಿಲೆ ದೇವಾಲಯದ ಗೋಶಾಲೆಯಲ್ಲಿ ಜೂ. 16 ರಂದು ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಗೋಶಾಲೆಗೆ ನುಗ್ಗಿ ಗೋಕಳ್ಳತನ ಮಾಡಲು ಯತ್ನಿಸಿದ್ದ ಅರೋಪಿಗಳನ್ನ ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬಜ್ಪೆ ವಾಜೀದ್ ಜೆ (26) ಹಾಗೂ ಬಜ್ಪೆ ಫೈಜಲ್ ( 40 ) ಬಂಧಿತರು.
ಕೃತ್ಯಕ್ಕೆ ಬಳಸಿದ ಹುಂಡಾಯ್ ಕ್ರೇಟಾ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕಮಲಶಿಲೆ ದೇವಾಲಯದ ಗೋಶಾಲೆಗೆ ನುಗ್ಗಿದ ಸಂದರ್ಭ ಕಣ್ಗಾವಾಲಿಗಿದ್ದ ಸಿಸಿಟಿವಿ ಸಂಸ್ಥೆ ಇದನ್ನು ಕಂಡು ದೇವಾಲಯದ ಸೆಕ್ಯೂರಿಟಿ ಗಾರ್ಡ್ ಹಾಗೂ ಪೊಲೀಸರ ಗಮನಕ್ಕೆ ತಂದಿದ್ದರು.
ತಕ್ಷಣ ಸೆಕ್ಯುರಿಟಿ ಗೋಶಾಲೆಗೆ ಹೋಗುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಸಿಸಿಟಿವಿ ವಿಡಿಯೋಗಳನ್ನ ಪರಿಶೀಲಿಸಿ ಕಾರ್ಯಪೃವತ್ತರಾದ ಪೊಲೀಸರು ಅರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಅರೋಪಿಗಳಿಗೆ ಹದಿನೈದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.