ಡೈಲಿ ವಾರ್ತೆ: 05/ಆಗಸ್ಟ್/2024

ಅಂತಾರಾಷ್ಟ್ರೀಯ ಮಟ್ಟದ
ಓಪನ್ ಕರಾಟೆ ಚಾಂಪಿಯನ್ ಶೀಪ್ ನಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಸಿಂಚನ ಕುಂದಾಪುರ

ಕುಂದಾಪುರ: ಶಿವಮೊಗ್ಗ ನೆಹರು ಸ್ಟೇಡಿಯಂ ನಲ್ಲಿ ಆ. 4 ರಂದು ಭಾನುವಾರ ನಡೆದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶೀಪ್ ನಲ್ಲಿ ಕುಂದಾಪುರದ ಕುಮಾರಿ ಸಿಂಚನ ಪ್ರಥಮ ಸ್ಥಾನ ಗಳಿಸಿದ್ದಾರೆ.

ಸತೀಶ್ ಹಾಗೂ ನಾಗವೇಣಿ ದಂಪತಿಗಳ ಪುತ್ರಿಯಾದ ಕುಮಾರಿ ಸಿಂಚನರವರು ಕುಂದಾಪುರ ಕೋಡಿಯ ಶ್ರೀ ರಾಮ ವಿದ್ಯಾ ಕೇಂದ್ರ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಆಗಿದ್ದಾರೆ.

ಕುಂದಾಪುರ ಕೆಡಿಫ್ ಕೋಚಿಂಗ್ ಕ್ಲಾಸ್ ನಲ್ಲಿ ಶಿಯನ್ ಶೇಕ್ ಹಾಗೂ ಶಶಾಂಕ್ ಶೈಣೆ ಈ ತರಬೇತಿದಾರರಿಂದ ತರಬೇತಿ ಪಡೆದಿರುತ್ತಾರೆ.
ಇವರ ಸಾಧನೆಗೆ ಶಾಲೆ ಅಧ್ಯಾಪಕ ವೃಂದದವರು, ಕರಾಟೆ ತರಬೇತಿದಾರರು ಶ್ಲಾಘಿಸಿದ್ದಾರೆ.