ಡೈಲಿ ವಾರ್ತೆ: 15/ಆಗಸ್ಟ್/2024

ಗಂಗಾವಳಿ: ಮುಹಿಯುದ್ದಿನ್ ಜಾಮಿಯಾ ಮಸೀದಿ ಗಂಗಾವಳಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಗಂಗಾವಳಿ.ಇದರ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಆಚರಣೆ.

ಗಂಗಾವಳಿ: ಮುಹಿಯುದ್ದಿನ್ ಜಾಮಿಯಾ ಮಸೀದಿ ಗಂಗಾವಳಿ ಹಾಗು ಹಯಾತುಲ್ ಇಸ್ಲಾಂ ಅರಬಿ ಮದರಸ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾ ರೋಹಣ ಕಾರ್ಯಕ್ರಮ ಎಂ.ಜೆ.ಎಂ. ಮಸೀದಿ ವಠಾರದಲ್ಲಿ ನಡೆಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ಎಂ.ಜೆ.ಎಂ.ಮಸೀದಿಯ ಖತೀಬರಾದ ಮುಹಮ್ಮದ್ ರಿಜ್ವಾನ್ ಸಖಾಫಿ ಅಧ್ಯಾಪಕರಾದ ನೌಷಾದ್ ಸಖಾಫಿ, ಇರ್ಫಾನ್ ಸಖಾಫಿ, ಕಬೀರ್ ನಿಜಾಮಿಯಾ ತ್ವಹಾ ಮಸ್ಜಿದ್. ಎಂ.ಜೆ.ಎಂ.ನ ಅಧ್ಯಕ್ಷರಾದ ನಜೀರ್ ಸಾಬ್ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ಮಾಸ್ಟರ್ ಮೌಲ್ವಿ,ಕೆ.ಎಂ. ಅಲಿ ಮೌಲ್ವಿ ಸೇರಿ ಧ್ವಜಾರೋಹಣ ನೆರೆವೇರಿಸಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ ಹೋರಾಟಗಾರರ ಬಗ್ಗೆ ಹಾಗು ಸ್ವಾತಂತ್ರದ ಬಗ್ಗೆ ಅಬ್ದುಲ್ ಮಾಸ್ಟರ್ ಮೌಲ್ವಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಮದರಸದ ವಿದ್ಯಾರ್ಥಿಗಳು.ಊರ ಹಿರಿಯರು ಕಿರಿಯರು. ಪಾಲ್ಗೊಂಡಿದರು.ಕಾರ್ಯಕ್ರಮವನ್ನು ಗಂಗಾವಳಿಯ ಸಾಮಾಜಿಕ ಕಾರ್ಯಕರ್ತರಾದ ಹುಸೇನ್ ಬಿಜಾಪುರ್ ಗಂಗಾವಳಿ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.