ಡೈಲಿ ವಾರ್ತೆ: 25/ಆಗಸ್ಟ್/2024ಕೊರಗ ಸಮುದಾಯದ ಯುವಕ ಯುವತಿಯರ ಬೃಹತ್ ರಕ್ತದಾನ ಶಿಬಿರಕ್ಕೆ ಶಾಸಕ ಕಿರಣ್ ಕೊಡ್ಗಿ ಭೇಟಿ

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಕುಂಭಾಶಿ ಮಕ್ಕಳ ಮನೆಯಲ್ಲಿ ಕೊರಗ ಶ್ರೇಯೋಭಿವೃದ್ಧಿ ಸಂಘ ಕುಂದಾಪುರ, ಪರಿಶಿಷ್ಟ ಗೆಳೆಯರು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ದಕ್ಷಿಣಕನ್ನಡ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಕೊರಗ ಸಮುದಾಯದ ಯುವಕ- ಯುವತಿಯರಿಂದ ಬೃಹತ್ ರಕ್ತದಾನ ಶಿಬಿರವು ನೆರವೇರಿತು.

ಇಂದು ರವಿವಾರ ಕುಂಭಾಶಿ ಮಕ್ಕಳ ಮನೆಯಲ್ಲಿ ಆಯೋಜಿಸಲಾದ.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ (ಐ.ಟಿ.ಡಿ.ಪಿ) ಉಡುಪಿ, ಹುಭಾಷಿಕ ಕೊರಗರ ಯುವ ಕಲಾವೇದಿಕೆ ರಂಗನಕೆರೆ-ಬಾರ್ಕೂರು, ಮಹಾತ್ಮಾ ಜ್ಯೋತಿ ಬಾಫುಲೆ ಯುವ ವೇದಿಕೆ ಬೈಂದೂರು, ಕೊರಗ ತನಿಯ ಯುವ ಕಲಾ ವೇದಿಕೆ ಮರವಂತೆ ಸಹಕಾರದಲ್ಲಿ ಈ ರಕ್ತದಾನ ಶಿಬಿರ ನಡೆಯಿತು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿಯವರು ಭೇಟಿ ನೀಡಿ ಕೊರಗ ಸಮುದಾಯದವರು ಇದೇ ಮೊದಲ ಬಾರಿಗೆ ರಕ್ತದಾನ ಶಿಬಿರ ಆಯೋಜಿಸಿದ್ದು. ಇವರ ಈ ಕಾರ್ಯವೈಕರಿಗೆ ಹರ್ಷ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘದ ಗಣೇಶ್ ಕುಂದಾಪುರ ಜಿಲ್ಲಾ ಬಿಜೆಪಿ ಎಸ್ ಟಿ ಮೋರ್ಚಾದ ಅಧ್ಯಕ್ಷ ಕುಮಾರ್ ದಾಸ್ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.