ಡೈಲಿ ವಾರ್ತೆ: 19/Sep/2024

ಮೂಹಿಯುದ್ದಿನ್ ಜಾಮಿಯಾ ಮಸೀದಿ ಗಂಗಾವಳಿ ಯೂನಿಟ್ ವತಿಯಿಂದ ಮಿಲಾದ್ ರ್‍ಯಾಲಿ

ಗಂಗಾವಳಿ: ಮೂಹಿಯುದ್ದಿನ್ ಜಾಮಿಯಾ ಮಸೀದಿ ಗಂಗಾವಳಿ. ಹಯಾತುಲ್ ಇಸ್ಲಾಂ ಅರಬಿ ಮದರಸ. ಹಾಗು ಎಸ್. ಎಸ್. ಎಫ್. ಗಂಗಾವಳಿ ಯೂನಿಟ್ ವತಿಯಿಂದ ಮಿಲಾದ್ ರ್‍ಯಾಲಿ

ವಿಶ್ವಕ್ಕೆ ಶಾಂತಿ ಸಾರಿದ ವಿಶ್ವ ವಿಮೋಚಕ ಲೋಕ ಪ್ರವಾದಿ ಪೈಗಂಬರ್ ನೆಬಿ ಮುಹಮ್ಮದ್ ಮುಸ್ತಫಾ (ಸ. ಅ.) 1499 ನೇ ಮಿಲಾದ್ ರ್ಯಾಲಿ ಶಾಂತಿ ಸೌಹಾರ್ದತೆಯ ನಾಡು ಗಂಗಾವಳಿಯಲ್ಲಿ ನಡೆಯಿತು. ಮುಹಿಯ್ಯು ದ್ದೀನ್ ಜಾಮಿಯ ಮಸೀದಿ. ಹಯಾತುಲ್ ಇಸ್ಲಾಂ ಅರಬಿ ಮದ್ರಸ. ಹಾಗು ಎಸ್. ಎಸ್. ಎಫ್. ವತಿಯಿಂದ ಮಿಲಾದ್ ರ್ಯಲಿ ಮುಹಿಯ್ಯುದ್ದಿನ್ ಜಾಮಿಯಾ ಮಸೀದಿ ಯಿಂದ ಹೊರಟು ತ್ವಾಹ ಮಸೀದಿ ದಿವರಕೆರಿಯಲ್ಲಿ ಸಮಾಪ್ತಿ ಗೊಂಡು ನಂತರ ತ್ವಾಹ ಮಸೀದಿಯಲ್ಲಿ ಮೌಲಿದ್ ಪಾರಾಯಣ ನಡೆಯಿತು. ನಂತರ ತಬರುಕ್ ವಿತರಣೆ ಮಾಡಲಾಯಿತು.

ಮಿಲಾದ್ ಮೆರವಣಿಗೆಯಲ್ಲಿ ನಾಡುಮಾಸ್ಕೆರಿ ಗ್ರಾಮ ಪಂಚಾಯತ್ ಸದಸ್ಯರು ಉದ್ಯಮಿ ಯಾದ ರಾಜೇಶ್ ನಾಯಕ್ ಅವರು ಸಿಹಿತಿಂಡಿ ವಿತರಣೆ ಮಾಡಿ ಸೌಹಾರ್ದ ಮೆರೆದರು.ರ್ಯಾಲಿಯಲ್ಲಿ ಮಸೀದಿಯ ಗುರುಗಳುಗಳು ಹಾಗು ಮದ್ರಸ ವಿದ್ಯಾರ್ಥಿಗಳು ಜಮಾತಿನ ಹಿರಿಯರು ಕಿರಿಯರು ಹಾಗು ಎಸ್. ಎಸ್. ಎಫ್. ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು.
ಲುಹರ್ ನಮಾಜಿನ ನಂತರ ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಂದ ಕಲಾ ಪ್ರತಿಭಾ ಹಾಗು ಬುರ್ದಾ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು.