ಡೈಲಿ ವಾರ್ತೆ: 21/Sep/2024

ಸಾಲಿಗ್ರಾಮ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಕಾರ್ಯಕರ್ತರೊಂದಿಗೆ ಜೊತೆಗೂಡಿ ಬಿಜೆಪಿ ಸದಸ್ಯತ್ವ ನೊಂದಾವಣೆಯಲ್ಲಿ ಶಾಸಕ ಕಿರಣ್ ಕೊಡ್ಗಿ ಭಾಗಿ

ಸಾಲಿಗ್ರಾಮ ಸೆ:21 ಕುಂದಾಪುರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಸನ್ಮಾನ್ಯ ದೇಶದ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಇಂದು
ಸಾಲಿಗ್ರಾಮ ಶಕ್ತಿಕೇಂದ್ರದ ಪೇಟೆಯ ಮುಖ್ಯ ರಸ್ತೆಯಲ್ಲಿರುವ ವ್ಯಾಪಾರಿಗಳ ಬಳಿ ತೆರಳಿ ಬಿಜೆಪಿ ಸದಸ್ಯತ್ವ ಮಾಡಲಾಯಿತು.ಹಾಗೂ ಈ ವೇಳೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸ್ವ ಇಚ್ಛೆಯಿಂದ ಸಾರ್ವಜನಿಕರು, ಮೋದಿಜಿಯವರ ಅಭಿಮಾನಿಗಳು. ಸ್ವಯಂ ಪ್ರೇರಿತವಾಗಿ ಬಿಜೆಪಿ ಸದಸ್ಯತ್ವ ನೊಂದಾವಣಿಗೆ ಸಹಕರಿಸಿದರು.

ಈ ನೋಂದಾವಣಿಯ ಪ್ರಕ್ರಿಯೆಯ
ಕಾರ್ಯಗಾರದಲ್ಲಿ, ಕುಂದಾಪುರ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಶಂಕರ್ ಅಂಕದ ಕಟ್ಟೆ,ಕುಂದಾಪುರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ ಎಸ್,, ಪಕ್ಷದ ಪ್ರಮುಖರಾದ ಜಯೇಂದ್ರ ಪೂಜಾರಿ, ರಾಜು ಪೂಜಾರಿ ಕಾರ್ಕಡ, ಸಂಜೀವ ದೇವಾಡಿಗ, ಉದಯ ಗಾಣಿಗ, ನಾಗರಾಜ್, ಶ್ಯಾಮ ಸುಂದರ ನಾಯರಿ,ಅನುಸೂಯ ಹೇರಳೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿನ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರ್ತಿ, ಪಂಚಾಯಿತಿನ ಸದಸ್ಯರು, ಕುಂದಾಪುರ ಮಂಡಲ ಪ್ರಮುಖರಾದ ಸತೀಶ್ ಕೆ.ಟಿ* ಸಂತೋಷ್ ಶೆಟ್ಟಿ, ಮಂಡಲ ಓಬಿಸಿ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್ ಹಾಗೂ ಇನ್ನಿತರ ಮುಖಂಡರು, ಮಂಡಲದ ಪದಾಧಿಕಾರಿಗಳು ವಿವಿಧ ಮೋರ್ಚಾದ ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಅಭಿಯಾನದ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.