ಡೈಲಿ ವಾರ್ತೆ: 21/Sep/2024

ಶೈಕ್ಷಣಿಕ ಗುಣಮಟ್ಟ ಸುಧಾರಣೆ, ಶಿಕ್ಷಕರ ಜ್ಞಾನ ಹೆಚ್ಚಳ, ಇಲಾಖೆ ಕಾರ್ಯಕ್ರಮಗಳಾದ ಸಮಾಲೋಚನೆ, ಶಿಕ್ಷಕರ ತರಬೇತಿ ಮತ್ತಿತರ ಮಹತ್ವದ ಉದ್ದೇಶ ಸಾಧನೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರಗಳ ಪಾತ್ರ ಮಹತ್ವದ್ದು ಹಾಗಾಗಿ ಲಕ್ಷ್ಮೇಶ್ವರ ಉತ್ತರ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ಕೇಂದ್ರದ ನವೀಕೃತಗೊಂಡ ಕಟ್ಟಡ ಈಗ ಕಂಗೊಳಿಸುತ್ತಿದೆ ಎಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯಶ್ರೀ ಚಂದ್ರು ಕೆ ಲಮಾಣಿ ಅವರು ಲಕ್ಷ್ಮೇಶ್ವರ ಪಟ್ಟಣದ ನಂ 01 ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನವೀಕೃತಗೊಂಡ ಲಕ್ಷ್ಮೇಶ್ವರ ಉತ್ತರ ಸಿ ಆರ್ ಸಿ ಕೇಂದ್ರದ ಕಟ್ಟಡವನ್ನು ಉದ್ಘಾಟಸಿ ಮಾತನಾಡಿದರು.


ಶಿಕ್ಷಣ ಇಲಾಖೆಯು ಪ್ರತಿ ಕ್ಲಸ್ಟರ್‌ಗೆ ಒಂದು ಸಮೂಹ ಸಂಪನ್ಮೂಲ ಕೇಂದ್ರ ಸ್ಥಾಪಿಸಿದೆ ಹಾಗೂ ಇವು ಶಿಕ್ಷಕರ ತರಗತಿ ಪ್ರಕ್ರಿಯೆಯ ಸವಾಲುಗಳನ್ನು ಎದುರಿಸಲು, ತರಗತಿ ಪ್ರಕ್ರಿಯೆಯ ನಾವೀನ್ಯತೆ ಕಲಿಯುವ ಸ್ಥಳವಾಗಿದೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ ರವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಹರ್ಷ ವ್ಯಕ್ತಪಡಿಸಿದರು.

ಲಕ್ಷ್ಮೇಶ್ವರ ಕ್ಲಸ್ಟರ್ ಸಂಪನ್ಮೂಲ ಕೇಂದ್ರವನ್ನು ಇಲ್ಲಿನ ಸಂಪನ್ಮೂಲ ವ್ಯಕ್ತಿ ಉಮೇಶ ನೇಕಾರ ಅವರು ಕ್ಲಸ್ಟರಿನ ಎಲ್ಲಾ ಶಿಕ್ಷಕರ ಸಹಕಾರದಿಂದ ಹಾಗೂ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ನೆರವಿನಿಂದಾಗಿ ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ನಾಣಕೀ ನಾಯಕ ಮಾತನಾಡಿ ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನವೀಕೃತ ಲಕ್ಷ್ಮೇಶ್ವರ ಉತ್ತರ ಸಮೂಹ ಸಂಪನ್ಮೂಲ ಕೇಂದ್ರದ ಉದ್ಘಾಟನೆಯ ಸವಿನೆನಪಿನ ಸಸಿ ನೆಟ್ಟು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಎನ್ ನಾಯಕ ಉದ್ಘಾಟಿಸಿ ಮಾತನಾಡಿದರು.
ಈ ಕೇಂದ್ರವು ಸರ್ಕಾರದ ಸುತ್ತೋಲೆಗಳು, ಗ್ರಂಥಾಲಯ ಪುಸ್ತಕಗಳು, ಶಿಕ್ಷಕರ ಕೈಪಿಡಿ, ಮಕ್ಕಳ ಕೈಪಿಡಿ, ಸರ್ಕಾರದ ನಿಯಮಾವಳಿಗಳು, ಜ್ಞಾನವನ್ನು ಹೆಚ್ಚಿಸುವ ಆಟಗಳು, ಶಿಕ್ಷಕರ ತರಗತಿ ಪ್ರಕ್ರಿಯೆ ಸರಳಗೊಳಿಸುವ ಪುಸ್ತಕಗಳು,ಸುಸಜ್ಜಿತ ಟೇಬಲ್, ಕುರ್ಚಿ, ಸ್ಮಾರ್ಟ್ ಟಿವಿ/ಕ್ಲಾಸ್, ಟ್ರಜುರಿ, ಕಂಪ್ಯೂಟರ್, ಪ್ರಿಂಟರ್, ಶಿಕ್ಷಕರ ಆನ್ಲೈನ್ ಸೇವೆಗಳ ಮಾಹಿತಿ, ಕ್ಲಸ್ಟರ್ ನಕ್ಷೆ, ಕ್ಲಸ್ಟರ್ ನ ಎಲ್ಲಾ ಶಾಲೆಗಳ ಸಂಪೂರ್ಣವಾದ ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಿದರು.

ಅಧ್ಯಕ್ಷರು ಕರಾಪ್ರಾಶಾಶಿಸಂಘ ಬಿ ಎಸ್ ಹರಲಾಪುರ, ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಗೀತಾ ಹಳ್ಯಾಳ ಹಾಗೂ ಎಲ್ ಎನ್ ನಂದೆಣ್ಣವರ,ಎಮ್ ಎಮ್ ಹವಳದ, ಪುರಸಭೆ ಸದಸ್ಯರಾದ ಪೂರ್ಣಿಮಾ ಪಾಟೀಲ, ಎಮ್ ಆರ್ ಪಾಟೀಲ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ ಗೋಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಎಚ್ ಎಸ್ ರಾಮನಗೌಡ್ರ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಮ್ ಬಿ ಹೊಸಮನಿ,ಆನಂದ ಮುಳಗುಂದ, ಎಸ್ ಡಿ ಲಮಾಣಿ, ಎಚ್ ಎಮ್ ಗುತ್ತಲ, ಎನ್ ಪಿ ಎಸ್ ಅಧ್ಯಕ್ಷರಾದ ಎಫ್ ಎಸ್ ತಳವಾರ, ಪ್ರಧಾನ ಗುರುಗಳಾದ ಡಿ ಎನ್ ದೊಡ್ಡಮನಿ, ಹರೀಶ್ ಎಸ್, ಉಮೇಶ್ ಹುಚ್ಚಯ್ಯಮಠ, ಬಿ ಎಮ್ ಯರಗುಪ್ಪಿ, ವಿ ಎಚ್ ದೀಪಾಳಿ,ಬಿ ಎಮ್ ಕುಂಬಾರ,ಪೂರ್ಣಾಜೆ ಕರಾಟೆ, ಎನ್ ಆರ್ ಸಾತಪುತೆ, ಆರ್ ಎಮ್ ಶಿರಹಟ್ಟಿ, ಎಸ್ ವಿ ಅಂಗಡಿ, ಸತೀಶ ಬೋಮಲೆ, ಗಿರೀಶ ನೇಕಾರ, ಉಮೇಶ ನೇಕಾರ,ಎನ್ ಎನ್ ಸಾವಿರಕುರಿ, ಕೆ ಪಿ ಕಂಬಳಿ, ಜ್ಯೋತಿ ಗಾಯಕವಾಡ, ನವೀನ ಅಂಗಡಿ, ಸಿ ವಿ ವಡಕಣ್ಣವರ, ಲೋಕೇಶ ಮಠದ, ಎಮ್ ಎಸ್ ಹಿರೇಮಠ,ಶಾಲಾ ಶಿಕ್ಷಕರಾದ ಸವಿತಾ ಬೋಮಲೆ, ಈ ಎಚ್ ಪೀಟರ್, ಎಸ್ ಎಸ್ ಮಹಾಲಿಂಗಶೆಟ್ಟರ, ಎಸ್ ಕೆ ಹವಾಲ್ದಾರ,ಬಿ ಸಿ ಪಟ್ಟೇದ, ಎನ್ ಎಸ್ ಬಂಕಾಪೂರ, ಶೃತಿ ಜಲ್ಲಿಗೇರಿ, ಚೈತನ್ಯ ಮುದಗಲ್ ಹಾಗೂ ತಾಲ್ಲೂಕಿನ ಎಲ್ಲಾ ಇಸಿಓ, ಬಿ ಆರ್ ಪಿ, ಸಿ ಆರ್ ಪಿ ಮತ್ತು ಎಲ್ಲಾ ಶೈಕ್ಷಣಿಕ ಸಂಘಗಳ ಪದಾಧಿಕಾರಿಗಳು, ಲಕ್ಷ್ಮೇಶ್ವರ ಉತ್ತರ ಕ್ಲಸ್ಟರನ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು.

ಉಮೇಶ ನೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ವರಿ ಅಡರಕಟ್ಟಿ, ಎಸ್ ಎಸ್ ಮುಳಗುಂದ ನಿರೂಪಿಸಿದರು. ಸತೀಶ್ ಬೋಮಲೆ ವಂದಿಸಿದರು.