ಡೈಲಿ ವಾರ್ತೆ: 26/Sep/2024

ದ್ರಾಕ್ಷಿ ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಸಹೋದರರು ಸಾವು

ವಿಜಯಪುರ: ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಸಹೋದರರು ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಡೆದಿದೆ.

ಮೃತರು ಬಾಬಾನಗರದ ನಿವಾಸಿಗಳಾದ ಶ್ರೀಕಾಂತ್ ವಿಜಾಪುರ (29), ರಾಜಕುಮಾರ್ ವಿಜಾಪುರ (31) ಮೃತ ಸಹೋದರರು ಎಂದು ತಿಳಿದು ಬಂದಿದೆ.

ಟಿಸಿಯಿಂದ ಬೋರ್ವೆಲ್ ಗೆ ವಿದ್ಯುತ್ ತಂತಿ ಎಳೆಯಲಾಗಿತ್ತು. ಬವೈರ್ ಗೆ ದ್ರಾಕ್ಷಿ ಕಬ್ಬಿಣದ ಎಂಗಲ್ ಸುತ್ತಿದ್ದರು. ಎಂಗಲ್ ಬಳಿ ವಿದ್ಯುತ್ ತಂತಿ ಕಟ್ ಆಗಿ ದ್ರಾಕ್ಷಿ ಸಾಲುಗಳಿಗೆ ಹಾಕಿದ ತಂತಿ ಹಾಗು ಎಂಗಲ್ ಗೆ ವಿದ್ಯುತ್ ಪ್ರವಹಿಸಿದೆ.

ದ್ರಾಕ್ಷಿ ತೋಟದಲ್ಲಿ ತಮ್ಮ ಶ್ರೀಕಾಂತ್ ಕೆಲಸ ಮಾಡುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಕೆಳಗೆ ಬಿದ್ದಿದ್ದಾನೆ. ಅಣ್ಣ ರಾಜಕುಮಾರ್ ಸಹೋದರ ಬಿದ್ದಿರುವುದನ್ನು ಕಂಡು ರಕ್ಷಿಸಲು ಹೋಗಿ ವಿದ್ಯುತ್ ತಗುಲಿ ಇಬ್ಬರು ಸಾವನಪ್ಪಿದ್ದಾರೆ.
ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.