ಡೈಲಿ ವಾರ್ತೆ: 02/OCT/2024

ದಾಂಡೇಲಿಯಿಂದ ಬೆಂಗಳೂರಿಗೆ ರೈಲು ಆರಂಭಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹೋರಾಟ ಸಮಿತಿಯಿಂದ ಮನವಿ

ದಾoಡೆಲಿ: ಇತ್ತೀಚಿಗೆ ಕೆನರಾ ಕ್ಷೇತ್ರದ ಲೋಕಸಭಾ ಸಂಸದರಾದ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಇವರು ನಗರ ದಲ್ಲಿ ಭಾರತಿ ಜನತಾ ಪಕ್ಷದ ಸದ್ಯಶ್ವತದ ಅಭಿಯಾನ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಸಂದರ್ಭದಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯವರು
ದಾಂಡೇಲಿ ತಾಲೂಕಿನ ವಿಷಯಗಳ ಬಗ್ಗೆ ಮನವಿ ಸಲ್ಲಿಸಲಾಯಿತು.

ಈ ಹಿಂದೆ ದಾಂಡೇಲಿಯಿಂದ ಪ್ರಯಾಣಿಕ ರೈಲು ಸಂಚರಿಸುತ್ತಿದ್ದು ಕೊರೋನ ಸಂದರ್ಭದಲ್ಲಿ ಎಲ್ಲಾ ಪ್ಯಾಸೆಂಜರ್ ರೈಲು ಸಂಚಾರ ಬಂದಾಗಿದ್ದು ಈಗಾಗಲೇ ಮತ್ತೆ ಏಲ್ಲಾ ರೈಲುಗಳು ಪ್ರಾರಂಭವಾಗಿದು ದಾಂಡೇಲಿಯ ಪ್ರಯಾಣಿಕ ರೈಲನ್ನು ಪ್ರಾರಂಭಿಸಲಿಲ್ಲ.
ಈ ವಿಷಯ ಬಗ್ಗೆ ನಗರದ ವಿವಿಧ ಸಂಘಟನೆಗಳು ಹಲವು ಬಾರಿ ಮನವಿ ಸಲ್ಲಿಸಿ ಪ್ರತಿಭಟನೆ ಸಹ ನಡೆಸುತ್ತಾ ಬಂದಿದ್ದರು ಆದರೆ ರೈಲ್ವೆ ಇಲಾಖೆ ಯವರು ಯಾವುದೇ ಕ್ರಮ ವಹಿಸಲಿಲ್ಲ ದಾಂಡೇಲಿ ನಗರವು ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದೆ ರಾಜ್ಯದ ವಿವಿಧ ಕಡೆಯಿಂದ ಪ್ರವಾಸಿಗರು ದಾಂಡೇಲಿಗೆ ಬರುತ್ತಾರೆ ಆದ್ದರಿಂದ ಬೆಂಗಳೂರುಯಿಂದ ದಾಂಡೇಲಿಗೆ ಪ್ರಯಾಣಿಕ ರೈಲು ಪ್ರಾರಂಭಿಸಬೇಕು ಎಂದು ಮನವಿ ಸಲಿಸಲಾಯಿತು.

ಕೇಂದ್ರ ಸರ್ಕಾರದ ಆವಾಸ್ ಯೋಜನೆಯಲ್ಲಿ ರಾಜ್ಯ ಸರ್ಕಾರ ಮತ್ತು ನಗರ ಸಭೆ ಇವರ ಜoಟಿ ಯೋಜನೆ ಯಲ್ಲಿ ಬಿ.ಪಿ.ಎಲ್ ಕುಟುಂಬ ಗಳಿಂದ ಜಿ. ಪ್ಲಸ್.ಟು ಮನೆಗಾಗಿ 2016 ಅರ್ಜಿ ಜೊತೆಗೆ ಐವತ್ತು ಸಾವಿರ ದಿoದ ಎಪ್ಪತ್ತು ಸಾವಿರ ಹಣ ವನ್ನು ಕಂತಿನಲಿ ಸುಮಾರು 847 ಪಲಾನು ಬವಿಗಳಿಂದ ತುoಬಿಸಿ ಕೋoಡು 1106 ಮನೆಗಳ ಕಾಮಗಾರಿಯನ್ನು ಬೆಂಗಳೂರಿನ ಗುತ್ತಿಗೆ ದಾರನು 2018 ರಿoದ ಪ್ರಾರoಬಿಸಿ ಒಂದು ವರ್ಷದಲ್ಲಿ ಕಾಮಗಾ ರಿ ಮುಗಿಸಿ ಮನೆಗಳನ್ನು ನೀಡಬೇಕಾಗಿತ್ತು ಆದ್ರೆ ಇಲ್ಲಿ ಯವರೆಗೆ 108 ಮನೆಗಳನ್ನು ಮಾತ್ರ ಫಲಾನುಭವಿ ಗಳಿಗೆ ನೀಡಿದಾರೆ. ಇನ್ನು 998 ಮನೆಗಳ ಕಾಮಗಾರಿಯನು ಸಂಪೂರ್ಣ ಕಾಮಗ್ರಿ ಯನು ನಿಲಿಸಲಾಗಿದೆ ಕಾರಣ ಕೂಡಲೇ ಕಾಮಗಾರಿಯನು ಪ್ರಾರoಬಿಸಲು ಕ್ರಮ ವಹಿಸಲು ಮನವಿ

ಗ್ರಹ ಮಂಡಳಿಯ ವರು 2016 ರಲ್ಲಿ ಸಾರ್ವಜನಿಕರಿಂದ ಮನೆ ನಿವೇಶನಕ್ಕಾಗಿ ಅರ್ಜಿಯನ್ನು ಆಹ್ವಾ ನಿಸಿದ್ರು ಅಂದಿನ ಕಾರ್ಪೊರೇಷನ್ ಬ್ಯಾಂಕದ್ಲಲಿ 3400 ಅರ್ಜಿಯನು ಸಲ್ಲಿ ಸಿದರು ಇಲ್ಲಿ ಯವರೆಗೆ ಮನೆ ನೀವೆಸನ್ ನೀಡುವ ಬಗ್ಗೆ ಯಾವ ದೇ ಕ್ರಮ ವಹಿಸುತ್ತಿಲ.
ಈ ಯೋಜನೆ ಮದ್ಯ ಮ ವರ್ಗ್ದವರಿಗಾಗಿ ಇರುವ ಯೋಜನೆ 2016ರಲ್ಲಿ ನಗರ ಸಭೆ ಯವರು ಗ್ರಹ ಮಂಡ ಳಿಯ ಅರ್ಜಿದಾರಿಗಾ ಗಿ 10 ಎಕರೆ ಭೂಮಿ ಯನ್ನು ಇಗಾಗಲೇ ಕಾಯ್ದಿರಿಸಲಾಗಿತ್ತು ಅತೀಕ್ರಮಣ ನಡೆಯು ತಾ ಇದ್ರು ನಗರಸಭೆ ಯವರು ಯಾವುದೇ ಕ್ರಮ ವಹಿಸುತಿಲಾ ಎoದು ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು ಪ್ರಯಾಣಿಕ ರೈಲನ್ನು ಪ್ರಾರoಬಿಸಲು ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಶೀಘ್ರದಲ್ಲಿ ರೈಲು ಪ್ರಾರಂಭವಾಗುತ್ತದೆ ಎಂದು ತಿಳಿಸಿದರು. ಅಲ್ಲದೆ ಜಿ+2 ಮನೆ ಗಳ ಹಾಗು ಗೃಹ ಮoಡಳಿಯ ಮನೆ ನಿವೇಶನ ಬಗ್ಗೆಯು ಸಹ ಸೂಕ್ತ ಕ್ರಮವಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪದಾಧಿಕಾರಿ ಗಳಾದ ಆಕ್ರಂ ಖಾನ್, ಅಶೋಕ ಪಾಟೀಲ್, ರಾಘವೆoದ್ರ ಘಡಪನವರ, ಮೊಹಮ್ಮದ್ ಗೌಸ ಬೆಟಗೆರಿ, ಮೂಜಿಬಾ ಚಬಿ, ಶಜಾದಿ ಕುಲ್ಸಪು ರ, ವಿಜಯಲಕ್ಷಮೀ ಅಕ್ಕಿ, ದತಾತ್ರೆ ಹೆಗಡೆ., ಸ್ಯಾಮ ಬೆoಗಳೂರು, ಮೊಮದ ಗೌಸ ಪಟೇಲ್ ಉಪಸ್ಥಿತರಿದ್ದರು.