ಡೈಲಿ ವಾರ್ತೆ: 05/OCT/2024

ಮೊಗವೀರ ಕುಲರತ್ನ ನಾಡೋಜ ಡಾ ಜಿ ಶಂಕರ್ ರವರ 69 ನೇ ಹುಟ್ಟುಹಬ್ಬ ಆಚರಣೆಯನ್ನು ಮೊಗವೀರ ಯುವ ಸಂಘಟನೆ ಕೋಟ ಘಟಕ ಮತ್ತು ಮಹಿಳಾ ಸಂಘಟನೆ ವತಿಯಿಂದ ವೃದ್ಧಶ್ರಾಮದಲ್ಲಿರುವ ಹಿರಿಯ ಚೇತನರಿಗೆ ಹಣ್ಣುಹಂಪಲು, ಬೆಡ್ ಶೀಟುಗಳನ್ನು ನೀಡುವುದರ ಮೂಲಕ ಸಂಭ್ರಮಾಚರಣೆ

ಕೋಟ: ಆರೋಗ್ಯ,ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿರುವ ನಮ್ಮೆಲ್ಲರ ಮಾರ್ಗದರ್ಶಕರಾಗಿರುವ ಮೊಗವೀರ ಕುಲರತ್ನ
ನಾಡೋಜ ಡಾ ಜಿ ಶಂಕರ್ ರವರ 69 ನೇ ಹುಟ್ಟು ಹಬ್ಬದ ಆಚರಣೆಯನ್ನು ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಕೋಟ ಘಟಕ ಮತ್ತು ಮಹಿಳಾ ಸಂಘಟನೆ ಕೋಟ ವತಿಯಿಂದ ಸತ್ಯಸಾಯಿ ಸೇವಾ ಟ್ರಸ್ಟ್‌ ‌ ಅತ್ತೂರು ವಿಠಲ ಪ್ರಭು ವೃದ್ಧಶ್ರಾಮ ಗುಳ್ಳಾಡಿ ಕೋಟದಲ್ಲಿ ವೃದ್ಧಶ್ರಾಮದಲ್ಲಿರುವ ಹಿರಿಯ ಚೇತನರಿಗೆ ಹಣ್ಣುಹಂಪಲು, ಸಿಹಿತಿಂಡಿ,ಆಹಾರ ಸಾಮಗ್ರಿಗಳು ಮತ್ತು ಬೆಡ್ ಶೀಟುಗಳನ್ನು ನೀಡುವುದರ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಜಯಂತ್ ಅಮಿನ್ ಕೋಡಿ, ನಿಕಟ ಪೂರ್ವ ಅಧ್ಯಕ್ಷರಾದ ರಾಜೇಂದ್ರ ಹಿರಿಯಡ್ಕ ಮಾಜಿ ಅಧ್ಯಕ್ಷರಾದ ಎಮ್ ಎಸ್ ಸಂಜೀವ ಪ್ರಧಾನ ಕಾರ್ಯದರ್ಶಿ ರವೀಂದ್ರ ಪುತ್ರನ್ ಕೋಟ ಘಟಕ ಅಧ್ಯಕ್ಷರಾದ ರಂಜಿತ್ ಕುಮಾರ್ ಬಾರಿಕೆರೆ ಮಾಜಿ ಅಧ್ಯಕ್ಷರಾದ ಸುರೇಶ್ ಕೆ ಉಪಾಧ್ಯಕ್ಷ ಚಂದ್ರ ಬೈಲ್ಮನೆ, ಮಹೇಶ್ ಕಂಬಳಗದ್ದೆ,ಕೃಷ್ಣ ಪುತ್ರನ್, ದೇವದಾಸ‌ ಕಾಂಚನ್,ಸತೀಶ್ ಶ್ರೀಯಾನ್,ನಾಗರಾಜ ಪುತ್ರನ್,ವಸಂತ್ ಸುವರ್ಣ, ಮಹಿಳಾ ಘಟಕ ಅಧ್ಯಕ್ಷ ಲಲಿತಾ ಭಾಸ್ಕರ್ ಮಾಜಿ ಅಧ್ಯಕ್ಷ ರಾದ ಗುಲಾಬಿ ದೇವದಾಸ್ ಬಂಗೇರ , ಸುಮತಿ ಭಾಸ್ಕರ್, ಯಶೋದ, ಗಾಯತ್ರೀ,ದೀಪಾ,
ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ
ಕೋಟ ಘಟಕದ ಪದಾಧಿಕಾರಿಗಳು ಮತ್ತು
ಸತ್ಯಸಾಯಿ ಸೇವಾ ಟ್ರಸ್ಟ್‌ ‌ ಅತ್ತೂರು ವಿಠಲ ಪ್ರಭು ವೃದ್ಧಶ್ರಾಮದ ಮೇಲ್ವಿಚಾರಕರಾದ ಮಾಲತಿ ಕೆ ಶೆಟ್ಟಿ ಉಪಸ್ಥಿತರಿದ್ದರು.