ಡೈಲಿ ವಾರ್ತೆ: 16/OCT/2024

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕ ರಾ ಸರಕಾರಿ ನೌಕರರ ಸಂಘದ ಚುನಾವಣಾ ನಾಮಪತ್ರ ಸಲ್ಲಿಕೆ

ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆ ಸನ್ 2024-2029 ಚುನಾವಣಾ ನಾಮಪತ್ರ ವನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂಬರ್ 1 ಲಕ್ಷ್ಮೇಶ್ವರ ಶಾಲೆಯ ಆವರಣದಲ್ಲಿ ಇಂದು ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದ ವತಿಯಿಂದ ಎಂ ಡಿ ವಾರದ ಎಫ್ ಎನ್ ಗೋಣೆಪ್ಪನವರ ,ಎಂ ಎ ನದಾಫ ,ವಾಯ್ ಡಿ ತಿರಕಣ್ಣವರ, ಡಿ ಎನ್ ದೊಡ್ಡಮನಿ, ಡಿ ಎಂ ಶಿರಂಜಿ ಆರು ಜನ ಉಮೇದುವಾರರು ನಾಮಪತ್ರ ಸಲ್ಲಿಸಿದರು.

ಚುನಾವಣಾ ಅಧಿಕಾರಿಯಾಗಿ ಶ್ರೀ ಎ ಎಮ್ ಮಠದ ವಿಶ್ರಾಂತ ಶಿಕ್ಷಕರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಯಾಗಿ ಶ್ರೀ ಎಸ್ ಎ ಬಣಗಾರ ವಿಶ್ರಾಂತ ಶಿಕ್ಷಕರು ಇವರನ್ನು ನೇಮಿಸಲಾಗಿದ್ದು ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದು , ನಾಮಪತ್ರ ಸಲ್ಲಿಸುವವರು ದಿನಾಂಕ 09/10/2024 ರಿಂದ 18/10/2024 ರ ವರೆಗೆ ಪ್ರತಿದಿನ ಮುಂಜಾನೆ 11:00 ಗಂಟೆಯಿಂದ ಸಾಯಂಕಾಲ 5:00 ರ ವರೆಗೆ ನಾಮಪತ್ರ ಸಲ್ಲಿಸಬಹುದು ಸಂದರ್ಭದಲ್ಲಿ
ಚುನಾವಣೆ ಅಧಿಕಾರಿಗಳಾದ ಶ್ರೀ ಎ ಎಮ್ ಮಠದ, ಶ್ರೀ ಎಸ್ ಎ ಬಣಗಾರ, ನೌಕರ ಸಂಘದ ಅಧ್ಯಕ್ಷರಾದ ಶ್ರೀ ಡಿ ಎಚ್ ಪಾಟೀಲ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ದ ಅಧ್ಯಕ್ಷರಾದ ಬಿಎಸ್ ಹರ್ಲಾಪೂರ, ಕಾರ್ಯದರ್ಶಿ ಚಂದ್ರು ನೇಕಾರ, ಉಪಾಧ್ಯಕ್ಷರಾದ ಡಿ ಡಿ ಲಮಾಣಿ ಎಲ್ ಎನ್ ನಂದೆಣ್ಣವರ, ಖಜಾಂಚಿ ಬಿಬಿ ಯತ್ತಿನಹಳ್ಳಿ,ಗೀತಾ ಹಳ್ಯಾಳ,ಬಿ ಕೆ ದ್ಯಾವನಗೌಡ್ರ ಎಂ ಎಸ್ ಹಿರೇಮಠ ಡಿ ಎಲ್ ಪಾಟೀಲ್ ಜಿ ಎಸ್ ಗುಡಗೇರಿ ಎಸ್ ಬಿ ಅಣ್ಣಿಗೇರಿ ಶ್ರೀಕಾಂತ ನಂದೆಣ್ಣವರ ಮುಂತಾದವರು ಭಾಗವಹಿಸಿದ್ದರು