ಡೈಲಿ ವಾರ್ತೆ: 17/OCT/2024

ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ

ಚಿತ್ರದುರ್ಗ: ಕೋಚಿಂಗ್ ಕೇಂದ್ರದಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ಆತ ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ಗ್ರಾಮದಲ್ಲಿ ಅ.16 ರಂದು ಬುಧವಾರ ನಡೆದಿದೆ.

ಚನ್ನಮಲ್ಲಿಕಾರ್ಜುನ ಅವರ ಮಗ ಮಿಥುನ್ (11) ಮೃತಪಟ್ಟ ಬಾಲಕ.

ಈತ ಕೋಚಿಂಗ್ ಮುಗಿಸಿಕೊಂಡು ರಾಂಪುರದ ಕೊಂಡಾಪುರ ರಸ್ತೆಯಲ್ಲಿ ಮನೆಗೆ ಮರುಳುವಾಗ ಈ ಘಟನೆ ನಡೆದಿದೆ.
ಮೂರು ನಾಯಿಗಳು ಬಾಲಕನ ತಲೆ, ಕಿವಿ, ಎದೆ, ಎರಡೂ ಕೈ ಮತ್ತು ಕಾಲುಗಳನ್ನು ಕಚ್ಚಿ ಘಾಸಿಗೊಳಿಸಿದೆ. ತೀವ್ರವಾಗಿ ಗಾಯಗೊಂಡ ಬಾಲಕನನ್ನು ಬಳ್ಳಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.