ಡೈಲಿ ವಾರ್ತೆ: 26/OCT/2024

ವೈದ್ಯಕೀಯ ನೆರವು ಹಸ್ತಾಂತರ

ಕೋಟ: ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಮುಖೇನ ಗಿಳಿಯಾರು ಹತ೯ಟ್ಟುವಿನ ಸಮಾಜ ಬಾಂಧವರೋವ೯ರಿಗೆ ವೈದ್ಯಕೀಯ ನೆರವಿನ ಚೆಕ್ಕನ್ನು ಹಸ್ತಾಂತರಿಸಲಾಯಿತು.

ಪಾರಂಪಳ್ಳಿಯ ಟ್ರಸ್ಟ್ ನ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಟ್ರಸ್ಟೀ ಗಳಾದ ಶ್ರೀ ಲಕ್ಷ್ಮೀ ನಾರಾಯಣ ಮಧ್ಯಸ್ಥ, ಶ್ರೀ ಸದಾಶಿವ ಮಧ್ಯಸ್ಥ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಯಂ ಶಿವರಾಮ ಉಡುಪ, ಉಪಾಧ್ಯಕ್ಷರಾದ ಶ್ರೀ ಪಟ್ಟಾಭಿರಾಮ ಸೋಮಯಾಜಿ, ಶ್ರೀ ಸುಬ್ರಾಯ ಉರಾಳ, ಗ್ರಾಮ ಪ್ರತಿನಿಧಿ ಶ್ರೀ ಪ್ರಭಾಕರ ಮಯ್ಯ, ಸಭಾದ ಕಾರ್ಯದರ್ಶಿ ಶ್ರೀ ಕೆ ರಾಜಾರಾಮ ಐತಾಳ ಮತ್ತಿತರರು ಉಪಸ್ಥಿತರಿದ್ದರು.