ಡೈಲಿ ವಾರ್ತೆ: 28/OCT/2024

ಪೆಟ್ರೋಲ್ ತುಂಬಿಸುವ ವೇಳೆ ಬೆಂಕಿ ಹಚ್ಚಿದ ದುಷ್ಕರ್ಮಿ- ಸಿಬ್ಬಂದಿಯ ಸಮಯಪ್ರಜ್ಞೆ ಯಿಂದ ತಪ್ಪಿದ ಬಾರಿ ದುರಂತ

ಹೈದರಾಬಾದ್: ಪೆಟ್ರೋಲ್ ತುಂಬಿಸುವ ವೇಳೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ ಭೀಕರ ಘಟನೆಯೊಂದು ತೆಲಂಗಾಣದ ಮಲ್ಲಾಪುರ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ಇದರಿಂದ ಆಗುತಿದ್ದ ಭಾರೀ ಅನಾಹುತವನ್ನು ಒಬ್ಬ ಸಿಬ್ಬಂದಿ ಎಚ್ಚೆತ್ತು ಬೆಂಕಿ ನಂದಿಸುವ ಮೂಲಕ ತಪ್ಪಿಸಿದ್ದಾರೆ.

ಸ್ಥಳೀಯರ ಪ್ರಕಾರ, ಚಂದನಕುಮಾರ್ (19) ತನ್ನ ಸ್ನೇಹಿತರೊಂದಿಗೆ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗೆ ಪೆಟ್ರೋಲ್ ತುಂಬಿಸಲು ಮಲ್ಲಾಪುರದ ಹಳೆ ಮೀರಪೇಟೆಗೆ ಬಂದಿದ್ದರು.
ಇದೇ ವೇಳೆ ಸಿಬ್ಬಂದಿ ಮತ್ತೋರ್ವ ಗ್ರಾಹಕರಿಗೆ ಬಾಟಲಿಯಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದಾಗ ಏಕಾಏಕಿ ಜೇಬಿನಿಂದ ಲೈಟರ್ ತೆಗೆದು ಚಂದನಕುಮಾರ್ ಹೊತ್ತಿಸಿದರು. ಗಾಬರಿಗೊಂಡ ಸಿಬ್ಬಂದಿ ತಕ್ಷಣ ಎಚ್ಚೆತ್ತ ಬೆಂಕಿ ನೊರೆಯಿಂದ ಬೆಂಕಿ ನಂದಿಸಿದ್ದಾರೆ. ಇದರೊಂದಿಗೆ ಪೆಟ್ರೋಲ್ ಬಂಕ್ ನಲ್ಲಿದ್ದವರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಚಂದನ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.