


ಡೈಲಿ ವಾರ್ತೆ:12/DEC/2024



ಮಾತು ಬಾರದ ಬಾಲಕನಿಗೆ ಮಾತಿನ ಮಾಣಿಕ್ಯ ಕೊಟ್ಟ ಶಬರಿಗಿರಿ ಅಯ್ಯಪ್ಪ ಸ್ವಾಮಿ: ಭೂಲೋಕದಲ್ಲಿ ನಡೆದ ಅಯ್ಯಪ್ಪನ ಪವಾಡ, ಪುತ್ತೂರಿನ ಪ್ರಸನ್ನ ಎಂಬ ಮಾಲಾದಾರಿಯ ಪವಾಡ ಸದೃಶ್ಯ – ಸ್ವಾಮಿಯೇ ಶರಣಂ ಅಯ್ಯಪ್ಪ

- ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ, ಪತ್ರಕರ್ತರು
ಸ್ವಾಮಿಯೇ ಶರಣಂ ಅಯ್ಯಪ್ಪ…. ಶಬರಿಗಿರಿ ವಾಸನೇ ಶರಣಂ ಅಯ್ಯಪ್ಪ ಎನ್ನುವ ಅಯ್ಯಪ್ಪನ ಉದ್ಘೋಷ ಮುಗ್ಧ ಬಾಲಕನ ಬಾಯಿಯಲ್ಲಿ ಉಚ್ಚರಿಸಿದ ರೀತಿ ಎಲ್ಲರಿಗೂ ಅಚ್ಚರಿ ತರಿಸಿದೆ.
ಆ ಹುಡುಗ ಮಾತು ಬಾರದ ಬಾಲಕ, ಹುಟ್ಟಿನಿಂದ ಕೈ ಸನ್ನೇ ಮತ್ತು ಬಾಯಿ ಸನ್ನೆಯಲ್ಲಿ ವಿಚಾರಗಳನ್ನು ತಿಳಿಸುತ್ತಿದ್ದ, ಶಬರಿಮಲೆಗೆ ಮಾಲೆಯನ್ನ ಧರಿಸಿ, 48 ದಿನಗಳ ಕಾಲ ವ್ರತ ಆಚರಣೆ ಪೂರೈಸಿ, ಭಕ್ತಿ ಮತ್ತು ಶ್ರದ್ಧೆಯಿಂದ ನಡೆದುಕೊಂಡು, ಅಯ್ಯಪ್ಪನ ಧ್ಯಾನದಲ್ಲಿ ಮುದ್ದನಾಗಿದ್ದ, ಅದೇ ರೀತಿ ಅಯ್ಯಪ್ಪನ ಪವಾಡ ಎಂಬಂತೆ ಬಾಲಕನು ಸ್ವಾಮಿಯ ಉದ್ಘೂಷವನ್ನ ಕೂಗಲು ಶುರು ಮಾಡಿಬಿಟ್ಟ, ಉಳಿದ ಸ್ವಾಮಿಗಳಿಗೆ ಅಚ್ಚರಿಯಾಗಿತ್ತು.

ಭೂಲೋಕದಲ್ಲಿ ಇಂತಹ ಪವಾಡಗಳು ನಡೆಯುತ್ತದೆ ಎನ್ನುವಲ್ಲಿ ಅಯ್ಯಪ್ಪ ಮಾಲಧಾರಿಯೇ ಸಾಕ್ಷಿ. ಪಂದಳ ಕಂದ ಅನ್ನದಾತ ಪ್ರಭು ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಕೇರಳದ ಶಬರಿಗಿರಿ ಇಡೀ ಜಗತ್ತಿಗೆ ಪ್ರೇರಕ. ಭಸ್ಮ ವಿಭೂತಿ ಪ್ರಿಯನಿಗೆ ಕನ್ಯ ಸ್ವಾಮಿಗಳೆಂದರೆ ಬಲು ಪ್ರೀತಿ, ಗುರುಸ್ವಾಮಿ ಎಂದರೆ ಕನ್ನೆ ಸ್ವಾಮಿಗಳನ್ನ ಪೋಷಿಸುವರು ಎಂದರ್ಥ. ಜಗತ್ತಿನಲ್ಲಿ ನಡೆಯುವ ಪವಾಡಗಳಿಗೆ ನಂಬಿಕೆ ಎನ್ನುವುದು ಬಲು ಶಕ್ತಿ. ಅದೇ ರೀತಿ ಅಯ್ಯಪ್ಪನ ಈ ಪವಾಡ ಮತ್ತೊಮ್ಮೆ ಸಾಕ್ಷಿಯಾಗಿದೆ.

ಅಯ್ಯಪ್ಪನ ಭಕ್ತರಿಗೆ ಸ್ವಾಮಿಯ ಮಹಿಮೆಯ ಪ್ರತ್ಯಕ್ಷ ದರ್ಶನವಾಗುತ್ತದೆ ಎನ್ನುವ ಹಲವು ಸುದ್ಧಿಗಳು ಎಲ್ಲೆಡೆ ಕೇಳಿ ಬರುತ್ತದೆ. ಇದೇ ಕಾರಣಕ್ಕಾಗಿಯೇ ಅಯ್ಯಪ್ಪ ಸ್ವಾಮಿಯ ಪ್ರಮುಖ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಮಾತು ಬರದ ಬಾಲಕನೊಬ್ಬ ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಮಾತನಾಡಲು ಶುರು ಮಾಡಿದ ಪವಾಡ ಸದೃಶ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಪುತ್ತೂರಿನ ಸಾಮೆತ್ತಡ್ಕ ನಿವಾಸಿ ದಿ. ಸೋಮಪ್ಪ ನಾಯ್ಕ್ ಮತ್ತು ಪ್ರಭಾವತಿ ದಂಪತಿಯ ಪುತ್ರ ಪ್ರಸನ್ನ (17) ಇದೀಗ ಮಾತನಾಡುವ ಮೂಲಕ ಅಯ್ಯಪ್ಪ ಪವಾಡಕ್ಕೆ ಸಾಕ್ಷಿಯಾಗಿದ್ದಾರೆ.
ಒಂದು ಶಬ್ದವನ್ನೂ ಸರಿಯಾಗಿ ಮಾತನಾಡದ ಪುತ್ತೂರು ನಿವಾಸಿ ಪ್ರಸನ್ನ ಎನ್ನುವ ಈ ಬಾಲಕ ಕಳೆದ ವರ್ಷ ಕರುಣಾಮಯಿ ಅಯ್ಯಪ್ಪ ಭಕ್ತವೃಂದ ಪುತ್ತೂರು ಇವರ ತಂಡದಲ್ಲಿ ಅಯ್ಯಪ್ಪ ಮಾಲೆ ಹಾಕಿ ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಏರಿದ್ದರು. ಸುಮಾರು 48 ಮೈಲು ದುರ್ಗಮ ಕಾಡಿನ ಹಾದಿಯಲ್ಲಿ ಸಾಗಿ ಸ್ವಾಮಿ ದರ್ಶನವನ್ನು ಪಡೆದು ಬಂದ ಬಳಿಕ ಮಾತನಾಡಲು ಶುರು ಮಾಡಿದ್ದಾನೆ. ಇದು ಅಯ್ಯಪ್ಪನ ಪವಾಡವೆಂದು ಸ್ಥಳೀಯರು ಹೇಳುತ್ತಿದ್ದಾರೆ.
ಮೊದಲ ಬಾರಿಗೆ ಮಾಲೆ ಧರಿಸಲು ಬಂದಾಗ ಕೇಳಲು ಮತ್ತು ಮಾತನಾಡಲು ಆಗದ ಸ್ಥಿತಿಯಲ್ಲಿದ್ದ ಪ್ರಸನ್ನನಿಗೆ ಇದೀಗ ಒಂದು ಕಿವಿ ಕೇಳಿಸುತ್ತಿದೆ. ಮಾತನಾಡಲು ಶಬ್ದಗಳು ಹೊರಡುತ್ತಿದೆ. ಮೊದಲ ಬಾರಿಗೆ ಮಾಲೆ ಹಾಕಲು ಬಂದ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಪ್ರಸನ್ನ ಬಾಯಲ್ಲಿ ಮಾತನಾಡಲಾರಂಭಿಸಿರುವುದು ಗುರು ಸ್ವಾಮಿಗಳಿಗೆ ಸಂತಸ ತಂದಿದೆ.
ಇಂತಹ ಹಲವು ಉದಾಹರಣೆಗಳನ್ನು ಹಿರಿಯ ಅಯ್ಯಪ್ಪ ಮಾಲಾಧಾರಿಗಳು ಉದಾಹರಣೆಯ ಸಹಿತ ನೀಡುತ್ತಾರೆ. ಈ ಸಾಲಿಗೆ ಪ್ರಸನ್ನ ಕೂಡಾ ಸೇರಿದ್ದು, ಅಯ್ಯಪ್ಪನ ಮಹಿಮೆಯಿಂದ ಎಲ್ಲವೂ ಸಾಧ್ಯ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ಪುತ್ತೂರಿನ ಮಹಾಲಿಂಗೇಶ್ವರ ಐಟಿಐನಲ್ಲಿ ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಮಾಡುತ್ತಿರುವ ಪ್ರಸನ್ನ, ವರ್ಷದ ಹಿಂದೆ ತನಕ ಒಂದು ಶಬ್ದವನ್ನೂ ಮಾತನಾಡಲಾರದ ಸ್ಥಿತಿಯಲ್ಲಿದ್ದ. ಇದೀಗ ಈತನ ಸ್ವಭಾವದಲ್ಲಾದ ಬದಲಾವಣೆ ಆತನ ಮೇಲೆ ಅಯ್ಯಪ್ಪ ಸ್ವಾಮಿ ದಯೆ ತೋರಿದ್ದಾನೆ ಅನ್ನೋದು ಹಿರಿಯ ಅಯ್ಯಪ್ಪ ಮಾಲಾಧಾರಿಗಳ ಅಭಿಪ್ರಾಯವಾಗಿದೆ.
ಭಕ್ತಿ ಮತ್ತು ನಿಷ್ಠೆಯಿಂದ ಅಯ್ಯಪ್ಪನ ವ್ರತವನ್ನು ಮಾಡಿದರೆ ಕಾನನವಾಸ ಭೂಲೋಕದ ಒಡೆಯ ನಿಜವಾಗಿಯೂ ಹರಸುತ್ತಾನೆ ಎನ್ನುವಲ್ಲಿ ಈ ಘಟನೆ ಸಾಕ್ಷಿ.