ಡೈಲಿ ವಾರ್ತೆ: 07/ಮಾರ್ಚ್ /2025

ಸಿಎಂ ಸಿದ್ದರಾಮಯ್ಯ ಅವರ ಇಂದಿನ ಬಜೆಟ್ ಬಿಜೆಪಿ ಅವರ ಹೊಟ್ಟೆಗೆ ಬೆಂಕಿ ಬಿದ್ದಂತೆ ಇದೆ – ನಾಗೇಂದ್ರ ಪುತ್ರನ್ ಕೋಟ

ಉಡುಪಿ ಜಿಲ್ಲೆಯ ಅಭಿವೃದ್ಧಿಯ ಯೋಜನೆಗಳಿಗೆ ಬಹಳಷ್ಟು ಒತ್ತು ಕೊಟ್ಟಿರುವ ಬಜೆಟ್, ಜಾತಿ, ಮತ, ಧರ್ಮ ನೋಡದೆ (ಸರ್ವ ಜನಾಂಗದ ಶಾಂತಿಯ ತೋಟ ) ಎಂಬಂತೆ ಇವತ್ತಿನ ಬಜೆಟ್ ಮಂಡನೆ.

ಉಡುಪಿ ಜಿಲ್ಲೆ ಅಭಿವೃದ್ಧಿಗೆ ಕಾಂಗ್ರೆಸ್ ಕೊಟ್ಟಿರುವ ಕೊಡುಗೆ ಅಪಾರ, ಇವತ್ತಿನ ಬಜೆಟ್ ನೋಡಿದ ಬಿಜೆಪಿ ಅವರಿಗೆ ಹೊಟ್ಟೆ ಉರಿ ತಡೆದು ಕೊಳ್ಳಲು ಆಗದೆ ಏನೇನೊ ಬಾಯಿಗೆ ಬಂದಂತೆ ಮಾತನಾಡುತ್ತ ಇದ್ದಾರೆ. ನಮ್ಮ ಉಡುಪಿ ಜಿಲ್ಲೆ ಇನ್ನು ಹೆಚ್ಚುನ ಅಭಿವೃದ್ಧಿ ಆಗುತ್ತಿತ್ತು, ಆದರೆ ಅಭಿವೃದ್ಧಿ ಮಾಡುವ ಮನೋಭಾವ ಇರುವ ಶಾಸಕರು ಇಲ್ಲದೆ ಇರುವುದು ಸ್ವಲ್ಪ ಮಟ್ಟಿನ ಹಿನ್ನೆಡೆ.

ನಮ್ಮ ಶಾಸಕರು ಅಭಿವೃದ್ಧಿ ಬಗ್ಗೆ ಮಾತನಾಡಿಯಂದ್ರೆ ಕೋಳಿ ಪಡಿ ಬಗ್ಗೆ ಮಾತಾಡೋದು,ಧಾರ್ಮಿಕವಾಗಿ ಬೇಕು ಕೋಳಿ ಪಡಿ, ಕಂಬಳ ಎಲ್ಲವೂ, ಆದರೆ ಧಾರ್ಮಿಕ ಆಚರಣಗೆ ಹಣ ಬೇಕು, ಉಡುಪಿ ಜಿಲ್ಲೆ ಕಾರ್ಮಿಕರಿಗೆ ಕೆಲಸ ಇಲ್ಲದೆ ವರ್ಷ ಗಟ್ಟಲೆ ಕಳೆದಿದೆ, ಮರಳಿನ ಸಮಸ್ಯೆ ಇದೆ, ಅದನ್ನು ಪರಿಣಾಮಕಾರಿಯಾಗಿ ಮಾತನಾಡುವುದಿಲ್ಲ ಬರಿ ಹಿಂದೂ ಮುಸ್ಲಿಂ ಎಂದು ಬೆಂಕಿ ಹಚ್ಚುವ ಬಿಜೆಪಿ ಶಾಸಕರ ಕೆಲಸ ಅಷ್ಟೇ.

ಇವತ್ತು ಉಡುಪಿ ಜಿಲ್ಲೆಗೆ ಬಹಳಷ್ಟು ಅನುದಾನ ಬಜೆಟ್ ನಲ್ಲಿ ನೀಡಿದೆ, ಗ್ಯಾರೆಂಟಿ ಗ್ಯಾರಂಟಿ ಯಾಗಿ ತೋರಿಸಿದೆ ಸರಕಾರ. ಇವತ್ತು ಉಡುಪಿ ಜಿಲ್ಲೆಗೆ ಕೊಟ್ಟಿರುವ ಯೋಜನೆ ಕರ್ನಾಟಕದ ಎಲ್ಲ ಜಿಲ್ಲೆಗೂ ಕೊಟ್ಟಿರುವ ಯೋಜನೆ ಉಡುಪಿ ಜಿಲ್ಲೆಗೂ ಕೊಟ್ಟಿದೆ, ಕಾಂಗ್ರೆಸ್ ಒಂದು ಕ್ಷೇತ್ರ ಗೆಲ್ಲದೆ ಇದ್ದರು ಸರಕಾರ ಅನುದಾನ ಕೊಟ್ಟಿದೆ, ಅದು ಬಿಜೆಪಿ ಶಾಸಕರ ಮುಖ ನೋಡಿ ಅಲ್ಲ, ಕರ್ನಾಟಕದ ಪ್ರತಿ ಜಿಲ್ಲೆಯು ಪ್ರಗತಿ ಹೊಂದಬೇಕು ಎನ್ನುವುದು ಸಿದ್ದರಾಮಯ್ಯ ತತ್ವ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಆಯೋಗ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಹೇಳಿದರು.